ಮೂಡಿಗೆರೆ ಶಾಸಕರ ಕಾರು ಢಿಕ್ಕಿ: ಸ್ಥಳದಲ್ಲೇ ಮಹಿಳೆ ಮೃತ್ಯು
ಪ್ರಕರಣ ದಾಖಲು
ಬೇಲೂರು, ಅ.3: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರ ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟಿರುವ ಘಟನೆ ವರದಿಯಾಗಿದ್ದು, ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ತಾಲೂಕಿನ ಬಿರಟೇಮನೆ ಗ್ರಾಮದ ಸುಬ್ಬೇಗೌಡರ ಪತ್ನಿ ಹೂವಮ್ಮ (58) ಸಾವನಪ್ಪಿದ ಮಹಿಳೆ. ಹೂವಮ್ಮ ಹಾಗೂ ಮೊಮ್ಮಗ ಪ್ರೀತಮ್ ಜೊತೆ ಹನುಮಂತನಗರದಲ್ಲಿರುವ ತಮ್ಮ ಮನೆಗೆ ದ್ವಿಚಕ್ರ ವಾಹನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ವೇಗವಾಗಿ ಬಂದಂತಹ ಶಾಸಕರ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಹೂವಮ್ಮ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬೇಲೂರು ಪೋಲಿಸರು ಭೇಟಿ ನೀಡಿ ವಾಹನ ಹಾಗೂ ಶಾಸಕರ ಕಾರು ಚಾಲಕ ಪ್ರವೀಣ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story