ತೀರ್ಥಹಳ್ಳಿ: ಕಾಡಾನೆಗಳ ದಾಳಿ, ಬೆಳೆ ನಾಶ
ಶಿವಮೊಗ್ಗ ,ಅ.15: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯಲ್ಲಿ ಆನೆಗಳ ಹಾವಳಿ ಜೋರಾಗಿದ್ದು, ಕಳೆದ 2 ದಿನದಿಂದ ಬಿದರಗೋಡು ಪಂಚಾಯತ್ ಗೆ ಸೇರಿದ ಮಲ್ಲಂದೂರು ಗ್ರಾಮದ ಸನಿಹದಲ್ಲಿ ಕಾರೇಕುಂಬ್ರೀ ಭಾಗದಲ್ಲಿ ಕಾಡಾನೆಗಳು ಬೀಡುಬಿಟ್ಟು ರೈತರ ಬೆಳೆ ನಾಶ ಮಾಡಿವೆ.
ರಾತ್ರಿ ವೇಳೆ ಗ್ರಾಮದ ತೋಟ ಮತ್ತು ಗದ್ದೆಗಳಿಗೆ ನುಗ್ಗಿ ದಾಳಿ ನಡೆಸುತ್ತಿವೆ. ಮಲ್ಲಂದೂರು ಗ್ರಾಮದ ಶ್ರೀನಿವಾಸ್ ಎಂಬುವರ ಮನೆಯ ಪಕ್ಕದಲ್ಲೇ ಬಾಳೆ ಗಿಡಗಳ ನಾಶ ಮಾಡಿವೆ. ಇವರ ತೋಟದಲ್ಲಿ ಮನಸೋ ಇಚ್ಛೆ ಓಡಾಡಿ ಬೆಳೆ ನಾಶ ಮಾಡಿವೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇದೇ ಗ್ರಾಮದಲ್ಲಿ ಅಪಾರ ಪ್ರಮಾಣ ಬೆಳೆ ನಾಶ ಮಾಡಿದ್ದ ಕಾಡಾನೆಗಳು. ವಿದ್ಯುತ್ ಲೈನ್ ಮೇಲೆ ಮರವನ್ನು ಕೆಡವಿದ್ದರಿಂದ ಕರೆಂಟ್ ಕೂಡ ಹೋಗಿತ್ತು. ಪ್ರತಿ ಬಾರಿ ಕಾಡಾನೆ ದಾಳಿ ಮಾಡಿದಾಗಲೂ ಅಡಕೆ-ಬಾಳೆ ತೋಟ, ಗದ್ದೆಗಳ ನಾಶ ಮಾಡುತ್ತಿವೆ. ಕಾಡಾನೆ ಸೆರೆಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Next Story