9 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಫೈಲ್ ಚಿತ್ರ
ಬೆಂಗಳೂರು, ಅ.20: ರಾಜ್ಯ ಸರಕಾರ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ ಎಸ್ಪಿ ಆಗಿ ಡಾ. ಸುಮನ್ ಡಿ. ಪೆನ್ನೇಕರ್, ರಾಯಚೂರು ಎಸ್ಪಿಯಾಗಿ ಬಿ. ನಿಖಿಲ್, ಕಲಬುರ್ಗಿ ಬಿ ಸಬ್ಡಿವಿಜನ್ ಎಸ್ಪಿಯಾಗಿ ಎಂ.ಎನ್. ದೀಪನ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ನಕ್ಸಲ್ ನಿಗ್ರಹ ದಳ ಎಸ್ಪಿಯಾಗಿ ನಿಕಮ್ ಪ್ರಕಾಶ್ ಅಮ್ರಿತ್, ಪೊಲೀಸ್ ತರಬೇತಿ ಇಲಾಖೆ ಪ್ರಾಂಶುಪಾಲರಾಗಿ ಕರುಣಾಗರನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿಯಾಗಿ ಸವಿತಾ, ಎಐಜಿಪಿ ಹೆಡ್ಕ್ವಾಟರ್ಸ್ ಆಗಿ ಅಶ್ವಿನಿ, ಎಫ್ಎಸ್ಎಲ್ ನಿರ್ದೇಶಕನಾಗಿ ಧರ್ಮೇಂದ್ರಕುಮಾರ್ ಮೀನಾ ಮತ್ತು ಉತ್ತರ ವಿಭಾಗದ ನೂತನ ಡಿಸಿಪಿಯಾಗಿ ಪಾಟೀಲ್ ವಿನಾಯಕ್ ವಸಂತ್ರಾವ್ ಅವರನ್ನು ಅವರನ್ನು ವರ್ಗಾವಣೆ ಮಾಡಲಾಗಿದೆ.
Next Story