ಕ್ರಿಶ್ಚಿಯನ್ ಮಿಷನರಿಗಳ ಸಮೀಕ್ಷೆ: ನಾಳೆ ಹೈಕೋರ್ಟ್ನಲ್ಲಿ ವಿಚಾರಣೆ
ಬೆಂಗಳೂರು, ಅ. 24: ರಾಜ್ಯದಲ್ಲಿ ಚರ್ಚ್ಗಳ ಮತ್ತು ಕ್ರಿಶ್ಚಿಯನ್ ಮಿಷನರಿಗಳ ಕಾರ್ಯವೈಖರಿಯನ್ನು ಸಮೀಕ್ಷೆ ನಡೆಸುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಸೋಮವಾರ ವಿಚಾರಣೆ ನಡೆಸಲಿದೆ.
ಜು.7ರಂದು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಜ್ಯದ 1,700 ಚರ್ಚ್ಗಳು ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಎಷ್ಟು ಕಾನೂನುಬದ್ಧವಾಗಿದೆ ಮತ್ತು ಅವುಗಳ ಚಟುವಟಿಕೆಗಳನ್ನು ಪರಿಶೀಲಿಸಲು ಸಮೀಕ್ಷೆಯನ್ನು ನಡೆಸಲು ಜಿಲ್ಲಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿತು.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್), ತನ್ನ ಅರ್ಜಿಯಲ್ಲಿ, ಈ ಆದೇಶವು ತಾರತಮ್ಯ ಮತ್ತು ಭಾರತೀಯ ಸಂವಿಧಾನದ ಉಲ್ಲಂಘನೆ ಎಂದು ಹೇಳಿದೆ. ಚರ್ಚ್ಗಳ ಸ್ಥಳ, ಖಾತಾ ಸಂಖ್ಯೆ, ಚರ್ಚ್ ಪಾದ್ರಿಯ ವಿವರಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲು ಯಾವುದೇ ಕಾರಣಗಳನ್ನು ಅಥವಾ ಉದ್ದೇಶವನ್ನು ಸರಕಾರ ಹೇಳಿಲ್ಲ ಎಂದು ಮನವಿಯಲ್ಲಿ ಸೇರಿಸಲಾಗಿದೆ.
‘ನಾವು ಇಲಾಖೆಯ ನಿರ್ದೇಶನವನ್ನು ಅನಗತ್ಯವೆಂದು ಪರಿಗಣಿಸುತ್ತೇವೆ. ಇದರಿಂದ ಯಾವುದೇ ಒಳ್ಳೆಯ ಇಚ್ಛೆ ಹೊರಬರುವುದಿಲ್ಲ, ವಾಸ್ತವವಾಗಿ, ಮತಾಂತರದ ಹುನ್ನಾರ ಮತ್ತು ಧಾರ್ಮಿಕ ವಿರೋಧಿ ಭಾವನೆಗಳ ಹಿನ್ನೆಲೆಯಲ್ಲಿ, ಇಂತಹ ಸಮೀಕ್ಷೆಗಳನ್ನು ಮಾಡುವುದು ಅಪಾಯಕಾರಿ' ಎಂದು ಈ ಹಿಂದೆ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಹೇಳಿಕೆ ನೀಡಿದ್ದರು.