ನಟ ಸುದೀಪ್ ದೇವಾಲಯ ನಿರ್ಮಾಣಕ್ಕೆ ಮುಂದಾದ ಅಭಿಮಾನಿಗಳು
photo: twitter@Nikhil_Kumar_k (Sudeep)
ರಾಯಚೂರು, ನ.30: ಚಲನಚಿತ್ರ ನಟ ಸುದೀಪ್ ದೇವಾಲಯ ನಿರ್ಮಾಣಕ್ಕೆ ರಾಯಚೂರಿನ ಅಭಿಮಾನಿಗಳು ಮುಂದಾಗಿದ್ದು, ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವ ಮಹದಾಸೆ ಹೊಂದಿದ್ದಾರೆ.
ನಟ ಸುದೀಪ್ ಮೊದಲು ಮಾನವನಾಗು ಎಂಬ ಸಂಘಟನೆ ಹುಟ್ಟುಹಾಕಿ ಆ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಂತೆ ಅವರ ಅಭಿಮಾನಿಗಳು ಸಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕೂಂದ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ದೇವಾಲಯ ನಿರ್ಮಿಸುತ್ತಿದ್ದು, ಈಗಾಗಲೇ ನಾಲ್ಕೂವರೆ ಅಡಿ ಎತ್ತರದ ಪುತ್ಥಳಿ ತಯಾರಾಗಿದ್ದು, ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ದೇವಾಲಯ ನಿರ್ಮಾಣಕ್ಕಾಗಿ ಶರಣಬಸವ ಎನ್ನುವರು ಅಂದಾಜು 35*40 ಅಡಿಯಷ್ಟು ಭೂಮಿಯನ್ನು ಉಚಿತವಾಗಿ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರೇ ಹಣ ಒಟ್ಟುಗೂಡಿಸಿ ದೇವಾಲಯ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ.
Next Story