ಸಿಎಂ ಆಡಳಿತ ಸಲಹೆಗಾರರಾಗಿ ಬೇಳೂರು ಸುದರ್ಶನ ನೇಮಕ
photo:(twitter@belurusudarshan)
ಬೆಂಗಳೂರು, ಡಿ. 5: ಹಿರಿಯ ಪತ್ರಕರ್ತ ಬೇಳೂರು ಸುದರ್ಶನ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇ–ಆಡಳಿತ ಸಲಹೆಗಾರರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಶನಿವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಆದೇಶ ಹೊರಡಿಸಿದ್ದು, ಸುದರ್ಶನ್ಗೆ ರಾಜ್ಯ ಸಚಿವರ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲೂ ಸುದರ್ಶನ ಅವರು ಇ-ಆಡಳಿತ ಸಲಹೆಗಾರರಾಗಿದ್ದರು. ಇದೀಗ ಬೊಮ್ಮಾಯಿ ಅವರು ಸಿಎಂ ಹುದ್ದೆಗೇರಿದ ಬಳಿಕ ಅವರನ್ನು ಪುನಃ ಸಲಹೆಗಾರರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
Next Story