ಚಿಕ್ಕಬಳ್ಳಾಪುರ: ದುಷ್ಕರ್ಮಿಗಳಿಂದ ಚರ್ಚ್ ನ ವಿಗ್ರಹ ಧ್ವಂಸ, ದೂರು ದಾಖಲು
ಹಾನಿಗೊಳಗಾದ ಎಸ್.ಟಿ ಅಂತೋನಿ ವಿಗ್ರಹ
ಚಿಕ್ಕಬಳ್ಳಾಪುರ: ಇಲ್ಲಿನ 160 ವರ್ಷ ಹಳೆಯ ಸೈಂಟ್ ಜೋಸೆಫ್ ಚರ್ಚ್ ನ ಎಸ್.ಟಿ ಅಂತೋನಿ ವಿಗ್ರಹಕ್ಕೆ ದುಷ್ಕರ್ಮಿಗಳು ದಾಳಿ ನಡೆಸಿ ಹಾನಿಗೊಳಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿನ ಸುಸೈಪಾಳ್ಯದ ಚರ್ಚ್ ನ ಎಸ್.ಟಿ ಅಂತೋನಿ ವಿಗ್ರಹಕ್ಕೆ ಬೆಳಗಿನ ಜಾವ ದುಷ್ಕರ್ಮಿಗಳು ದಾಳಿ ನಡೆಸಿ ಹಾನಿಗೊಳಿಸಿದ್ದಾರೆ. ದಾಳಿಯಿಂದ ವಿಗ್ರಹದ ಗಾಜು ಪುಡಿಯಾಗಿದ್ದು, ವಿಗ್ರಹಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಕ್ರೈಸ್ತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
Next Story