ಪರಿಹಾರ ಕೊಡಲಾಗದ ಸರಕಾರ ರೈತರ ಅರ್ಜಿಯಲ್ಲೂ ದೋಷ ಹುಡುಕುತ್ತಿದೆ: ಕಾಂಗ್ರೆಸ್ ಟೀಕೆ
ಬೆಂಗಳೂರು, ಡಿ. 26: `ಕುಣಿಯಲಾರದವ ನೆಲ ಡೊಂಕು' ಎನ್ನುವಂತೆ, ಪರಿಹಾರ ಕೊಡಲಾಗದ ಸರಕಾರಕ್ಕೆ ರೈತರ ಅರ್ಜಿಯಲ್ಲೂ ಕೊಂಕು ಹುಡುಕುತ್ತಿದೆ' ಎಂದು ರಾಜ್ಯ ಸರಕಾರವನ್ನು ಕಾಂಗ್ರೆಸ್ ಟೀಕಿಸಿದೆ.
ರವಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, `ನೆರೆ ಹಾವಳಿಯಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಸರಕಾರ ರೈತರ ಅರ್ಜಿಯಲ್ಲಿ ಸಣ್ಣ ಪುಟ್ಟ ದೋಷಗಳನ್ನು ನೆಪವಾಗಿಟ್ಟುಕೊಂಡು ತಿರಸ್ಕರಿಸುತ್ತಿರುವುದು ಅಕ್ಷಮ್ಯ. ಅರ್ಜಿ ಪ್ರಕ್ರಿಯೆಯನ್ನು ಸರಳಿಕರಿಸುವತ್ತ ಕೃಷಿ ಸಚಿವರು ಗಮನ ಹರಿಸಬೇಕು ಎಂದು ಒತ್ತಾಯಿಸಿದೆ.
ಕುಣಿಯಲಾರದವ ನೆಲ ಡೊಂಕು ಎನ್ನುವಂತೆ, ಪರಿಹಾರ ಕೊಡಲಾಗದ ಸರ್ಕಾರಕ್ಕೆ ರೈತರ ಅರ್ಜಿಯಲ್ಲೂ ಕೊಂಕು ಹುಡುಕುತ್ತಿದೆ.
— Karnataka Congress (@INCKarnataka) December 26, 2021
ನೆರೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಸರ್ಕಾರ ರೈತರ ಅರ್ಜಿಯಲ್ಲಿ ಸಣ್ಣ ಪುಟ್ಟ ದೋಷಗಳನ್ನು ನೆಪವಾಗಿಟ್ಟುಕೊಂಡು ತಿರಸ್ಕರಿಸುತ್ತಿರುವುದು ಅಕ್ಷಮ್ಯ.
ಅರ್ಜಿ ಪ್ರಕ್ರಿಯೆಯನ್ನು ಸರಳಿಕರಿಸುವತ್ತ ಕೃಷಿ ಸಚಿವರು ಗಮನಿಸಬೇಕು. pic.twitter.com/TlvqO7lgSj
Next Story