ಬಿಜೆಪಿ ಆಡಳಿತ ಕಸಕ್ಕಿಂತಲೂ ಕಡೆ: ಕಾಂಗ್ರೆಸ್ ಟೀಕೆ
ಬೆಂಗಳೂರು, ಡಿ. 26: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಬೆಂಗಳೂರಿನ ಕಸದ ಸಮಸ್ಯೆ ಉಲ್ಬಣಿಸುತ್ತದೆ ಎಂದರೆ ಬಿಜೆಪಿಯ ಆಡಳಿತ ಕಸಕ್ಕಿಂತಲೂ ಕಡೆಯಾಗಿದೆ ಎಂದರ್ಥ!' ಎಂದು ಕಾಂಗ್ರೆಸ್ ಟೀಕಿಸಿದೆ.
ರವಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಕಸ ವಿಲೇವಾರಿಯ ಗುತ್ತಿಗೆದಾರರ ಬಿಲ್ ಪಾವತಿಸದೆ ಗುತ್ತಿಗೆದಾರರು, ಪೌರಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಜೆಪಿಯ ಬ್ಯಾಡ್ ಗವರ್ನೆನ್ಸ್ಗೆ ಇದೊಂದು ಸಣ್ಣ ಉದಾಹರಣೆ ಅಷ್ಟೇ!' ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಬೆಂಗಳೂರಿನ ಕಸದ ಸಮಸ್ಯೆ ಉಲ್ಬಣಿಸುತ್ತದೆ ಎಂದರೆ ಬಿಜೆಪಿಯ ಆಡಳಿತ ಕಸಕ್ಕಿಂತಲೂ ಕಡೆಯಾಗಿದೆ ಎಂದರ್ಥ!
— Karnataka Congress (@INCKarnataka) December 26, 2021
ಬಿಬಿಎಂಪಿ ಕಸ ವಿಲೇವಾರಿಯ ಗುತ್ತಿಗೆದಾರರ ಬಿಲ್ ಪಾವತಿಸದೆ ಗುತ್ತಿಗೆದಾರರು, ಪೌರಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬಿಜೆಪಿಯ ಬ್ಯಾಡ್ ಗವರ್ನೆನ್ಸ್ಗೆ ಇದೊಂದು ಸಣ್ಣ ಉದಾಹರಣೆ ಅಷ್ಟೇ! pic.twitter.com/n5ObtC6AUw
Next Story