ಹಳಿ ಇಲ್ಲದ ರೈಲನ್ನು ಏಕೆ ಏದುಸಿರು ಬಿಡುತ್ತಾ ಮುನ್ನಡೆಸುವಿರಿ?: ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು
ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರ ಮಧ್ಯೆ ವಾಕ್ಸಮರ ನಡೆಯುತ್ತಿದ್ದು, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ಸಿದ್ದರಾಮಯ್ಯ ಅವರೇ ಸತ್ಯ ಯಾವುದು, ಮಿಥ್ಯೆ ಯಾವುದು ಎಂಬುದನ್ನು ಮೊದಲು ಹೇಳಿ. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದು ನೀವೋ, ಕುಮಾರಸ್ವಾಮಿಯೋ? ಹಳಿ ಇಲ್ಲದ ರೈಲನ್ನು ಏಕೆ ಏದುಸಿರು ಬಿಡುತ್ತಾ ಮುನ್ನಡೆಸುವಿರಿ? ನಿಮ್ಮ ಪಿತ್ರಾರ್ಜಿತ ಆಸ್ತಿಯಿಂದ ದಾನ ಮಾಡಿದ ಹಾಗೆ ಏಕೆ ವರ್ತಿಸುತ್ತಿದ್ದೀರಿ?' ಎಂದು ಬಿಜೆಪಿ ಪ್ರಶ್ನಿಸಿದೆ.
'ಸಿದ್ದರಾಮಯ್ಯನವರೇ, ಮೇಕೆದಾಟು ಯೋಜನೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ನೀವು ಜೆಡಿಎಸ್ ಕೂಸನ್ನು ಮುದ್ದಿಸುತ್ತಿದ್ದೀರಾ? ನಿಮ್ಮದು ಕ್ಲೋನಿಂಗ್ ಪದ್ಧತಿಯೇ? ಪಾದಯಾತ್ರೆ ನೆಪದಲ್ಲಿ #ಸುಳ್ಳಿನಜಾತ್ರೆ ಮಾಡಿ ಜನರ ಹಾದಿ ತಪ್ಪಿಸಬೇಡಿ' ಎಂದು ಹೇಳಿದೆ.
ಸಿದ್ದರಾಮಯ್ಯ ಅವರೇ ಸತ್ಯ ಯಾವುದು, ಮಿಥ್ಯೆ ಯಾವುದು ಎಂಬುದನ್ನು ಮೊದಲು ಹೇಳಿ.
— BJP Karnataka (@BJP4Karnataka) January 2, 2022
ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದು ನೀವೋ, ಕುಮಾರಸ್ವಾಮಿಯೋ?
ಹಳಿ ಇಲ್ಲದ ರೈಲನ್ನು ಏಕೆ ಏದುಸಿರು ಬಿಡುತ್ತಾ ಮುನ್ನಡೆಸುವಿರಿ?
ನಿಮ್ಮ ಪಿತ್ರಾರ್ಜಿತ ಆಸ್ತಿಯಿಂದ ದಾನ ಮಾಡಿದ ಹಾಗೆ ಏಕೆ ವರ್ತಿಸುತ್ತಿದ್ದೀರಿ?#ಸುಳ್ಳಿನಜಾತ್ರೆ pic.twitter.com/Gfbuzo7qG3