ಮುಂಡಗೋಡ: ಮಹಿಳೆಗೆ ಹಲ್ಲೆ ಮಾಡಿ ನಗ-ನಗದು ದೋಚಿ ಪರಾರಿಯಾದ ದುಷ್ಕರ್ಮಿ
ಮುಂಡಗೋಡ: ಕುಡಿಯಲು ನೀರು ಕೇಳಿ ಮನೆಯೊಳಗೆ ಪ್ರವೇಶಿಸಿದ ದುಷ್ಕರ್ಮಿಯೋರ್ವ ಮಹಿಳೆಯ ಕುತ್ತಿಗಿಗೆ ಚಾಕುವಿನಿಂದ ಹಲ್ಲೆ ನಡೆಸಿ ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನ, ನಗದು ದೋಚಿ ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಕಾತೂರ ಗ್ರಾಮದ ಗೀತಾ ಯಲ್ಲಾಪುರ ಎಂಬವರ ಮನೆಗೆ ಸೋಮವಾರ ರಾತ್ರಿ ಬಂದ ದುಷ್ಕರ್ಮಿಯೋರ್ವ ಕುಡಿಯಲು ನೀರು ಕೇಳಿದ್ದಾನೆ. ನಂತರ ಗೀತಾ ಅವರ ಕುತ್ತಿಗಿಗೆ ಚಾಕುವಿನಿಂದ ಹಲ್ಲೆ ಮಾಡಿ, ಅವರ ಕೊರಳಿನಲ್ಲಿದ್ದ ಸುಮಾರು 70 ಸಾವಿರ ರೂ. ಬೆಲೆಯ ಸರ, 20 ಸಾವಿರ ರೂ. ಮೌಲ್ಯದ 2 ಉಂಗರು ಹಾಗೂ 10 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾನೆ. ಸುಮಾರು 20-25 ವಯಸ್ಸಿನ ತೆಳ್ಳಗೆ ಇರುವ ಹುಡುಗ ನೋಡಿದರೆ ಗುರುತು ಹಿಡಿಯುತ್ತೇನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story