ಕಾಂಗ್ರೆಸ್ಸಿನಲ್ಲಿ ಒಬ್ಬೊಬ್ಬ ನಾಯಕರದು ಒಂದೊಂದು ಬಣ: ಬಿಜೆಪಿ ಟೀಕೆ
ಬೆಂಗಳೂರು, ಫೆ. 3: `ಕಾಂಗ್ರೆಸ್ಸಿಗರೇ, ಗೆಲುವಿನ ಸಮೀಕ್ಷೆ ಮಾಡುವ ಬದಲಾಗಿ ಮೊದಲು ತಮ್ಮ ಪಕ್ಷದ ಆಂತರಿಕ ಸಮೀಕ್ಷೆ ಮಾಡಿಕೊಳ್ಳಿ. ಒಬ್ಬೊಬ್ಬ ನಾಯಕರದು ಒಂದೊಂದು ಬಣ. ಒಬ್ಬ ನಾಯಕ ಕೋರ್ಟಿಗೆ ಅಲೆಯುತ್ತಿದ್ದರೆ ಮತ್ತೊಬ್ಬ ನಾಯಕ ರೆಸಾರ್ಟಿಗೆ ಅಲೆಯುತ್ತಿದ್ದಾರೆ. ಬೆಂಬಲಿಗರು ಪಿಸುಮಾತಿನಲ್ಲಿ ನಿರತರಾಗಿದ್ದಾರೆ. ಎಲ್ಲಿಗೆ ಪಯಣ, ಯಾವುದೋ ದಾರಿ?' ಎಂದು ಬಿಜೆಪಿ ಲೇವಡಿ ಮಾಡಿದೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆಯಾಗಿ ಒಮ್ಮೆ ಎತ್ತಿನ ಗಾಡಿ, ಒಮ್ಮೆ ಕುದುರೆ ಗಾಡಿ, ಒಮ್ಮೆ ಸೈಕಲ್ ಯಾತ್ರೆ, ಮತ್ತೊಮ್ಮೆ ಪಾದಯಾತ್ರೆ, ಜೊತೆಯಾಗಿ ಹೋಗಿದ್ದೇ ಹೋಗಿದ್ದು! ಒಗ್ಗಟ್ಟಿನ ಮಂತ್ರದ ನಾಟಕ ಅಸಲಿಯತ್ತು ಈಗ ಬಯಲಾಗುತ್ತಿದೆ. ಇವರಿಬ್ಬರ ನಾಟಕದ ಪ್ರಯಾಣ 2023 ವರೆಗೆ ಜೊತೆಯಾಗಿ ಸಾಗುವುದೇ?' ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ಸಿಗರೇ, ಗೆಲುವಿನ ಸಮೀಕ್ಷೆ ಮಾಡುವ ಬದಲಾಗಿ ಮೊದಲು ತಮ್ಮ ಪಕ್ಷದ ಆಂತರಿಕ ಸಮೀಕ್ಷೆ ಮಾಡಿಕೊಳ್ಳಿ.
— BJP Karnataka (@BJP4Karnataka) February 3, 2022
ಒಬ್ಬೊಬ್ಬ ನಾಯಕರದು ಒಂದೊಂದು ಬಣ. ಒಬ್ಬ ನಾಯಕ ಕೋರ್ಟಿಗೆ ಅಲೆಯುತ್ತಿದ್ದರೆ ಮತ್ತೊಬ್ಬ ನಾಯಕ ರೆಸಾರ್ಟಿಗೆ ಅಲೆಯುತ್ತಿದ್ದಾರೆ. ಬೆಂಬಲಿಗರು ಪಿಸು ಮಾತಿನಲ್ಲಿ ನಿರತರಾಗಿದ್ದಾರೆ.
ಎಲ್ಲಿಗೆ ಪಯಣ, ಯಾವುದೋ ದಾರಿ?#ಕಾಂಗ್ರೆಸ್ಕಲಹ pic.twitter.com/VtwMZMvZMU