ಹನೂರು: ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವಕ ನೀರು ಪಾಲು
ವಸಂತ್ - ಮೃತ ಯುವಕ
ಹನೂರು : ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕನೊಬ್ಬ ಗುಂಡಾಪುರದ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟಯುವಕ ಹನೂರಿನ ವಸಂತ್ ಎಂದು ಗುರುತಿಸಲಾಗಿದ್ದು, ಹನೂರು ಪಟ್ಟಣದಲ್ಲಿ ಎಲೆಕ್ಟಿಕಲ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ವಸಂತ್ ಸ್ನೇಹಿತರೊಂದಿಗೆ ಗುಂಡಾಪುರದ ಉಡುತೊರೆಹಳ್ಳ ಜಲಾಶಕ್ಕೆ ತೆರಳಿದ್ದ ಎಂದು ಹೆಳಲಾಗಿದೆ.
ವಸಂತ್ ನೀರಿನಲ್ಲಿ ನಾಪತ್ತೆಯಾಗಿರುವುದನ್ನು ಅರಿತ ಸ್ನೇಹಿತರು ನೀರಿನಲ್ಲಿ ಕೆಲ ಕಾಲ ಈಜಿ ಹುಡುಕಾಟ ನಡೆಸಿದ್ದಾರೆ. ಬಳಿಕ ವಸಂತ್ ಸಿಗದಿದ್ದಾಗ ಆತಂಕಗೊಂಡು ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಠಾಣಾ ಅಧಿಕಾರಿಗಳು ದೇಹವನ್ನು ಹಲವು ತಾಸುಗಳ ಕಾಲ ಹೊರತೆಗೆಯಲು ಕಾರ್ಯಾಚರಣೆ ನೆಡೆಸಿ ಸಂಜೆ ವೇಳೆ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ
Next Story