ಮಂಡ್ಯ | ಜಗಳ ಬಿಡಿಸಲು ಹೋದ ಯುವಕನ ಹತ್ಯೆ: ಓರ್ವ ಸೆರೆ
ಮಂಡ್ಯ, ಮೇ 10: ಡಾಬ ಒಂದರಲ್ಲಿ ಜಗಳ ಬಿಡಿಸಲು ಹೋದ ಯುವಕನನ್ನು ಇರಿದು ಕೊಲೆ ಮಾಡಿರುವ ಘಟನೆ ಮದ್ದೂರು ತಾಲೂಕು ಕೊಪ್ಪ ಗ್ರಾಮದಲ್ಲಿ *ಸೋಮವಾರ ತಡರಾತ್ರಿ ನಡೆದಿದೆ.
ಕೊಪ್ಪ ಗ್ರಾಮದ ಯುವಕ ಸಾಗರ್ (25) ಕೊಲೆಯಾಗಿದ್ದು, ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಡಾಬದಲ್ಲಿ ಊಟ ಮಾಡುತಿದ್ದ ಸಾಗರ್, ಪಕ್ಕದ ಟೇಬಲ್ ನಲ್ಲಿನ ಯುವಕರ ಜಗಳಬಿಡಿಸಲು ಯತ್ನಿಸಿದಾಗ ಗಿರೀಶ್ ಎಂಬಾತ ಚಾಕುವಿನಿಂದ ಇರಿದ ಎನ್ನಲಾಗಿದೆ.
ಈ ಸಂಬಂಧ ರಾಕೇಶ್ ಎಂಬತನನ್ನು ಪೋಲಿಸಿರು ಬಂಧಿಸಿದ್ದು, ಗಿರೀಶ್, ಪ್ರತಾಪ್ ಪರಾರಿಯಾಗಿದ್ದಾರೆ. ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಾಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story