ಸಿಎಂ ದೆಹಲಿ ಪ್ರವಾಸದಿಂದ ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಿಲ್ಲ: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: 'ಒಂದೇ ತಿಂಗಳಲ್ಲಿ 2ನೇ ಬಾರಿ ಸಿಎಂ ದೆಹಲಿ ವಿಮಾನ ಹತ್ತಿದ್ದಾರೆ, ಅವರಿಗೆ ರಾಜ್ಯದಲ್ಲಿ ಕೆಲಸ ಇರುವುದಕ್ಕಿಂತ ದೆಹಲಿಯಲ್ಲೇ ಹೆಚ್ಚು ಕೆಲಸ ಇರುವಂತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸದ ಕುರಿತು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸಿಎಂ ದೆಹಲಿ ಪ್ರವಾಸಗಳು ಕೇವಲ ಅವರ ಕುರ್ಚಿ ಉಳಿಸಿಕೊಳ್ಳುವ ಕಸರತ್ತೇ ಹೊರತು ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಿಲ್ಲ. ರಾಜ್ಯದಲ್ಲಿರುವುದು ಹೈಕಮಾಂಡ್ ಅಡಳಿತವೋ, ಬೊಮ್ಮಾಯಿ ಸರ್ಕಾರವೋ?' ಎಂದು ಪ್ರಶ್ನೆ ಮಾಡಿದೆ.
''ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ, ಆದರೆ ಇನ್ನೂ ಸಹ ಪಠ್ಯಪುಸ್ತಕಗಳನ್ನು ಪೂರೈಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪಠ್ಯಗಳಲ್ಲಿ 'ಪ್ರೊಪೆಗಂಡಾ' ಸ್ಥಾಪಿಸಲು ಇರುವ ಆಸಕ್ತಿ ಮಕ್ಕಳ ಶಿಕ್ಷಣದ ಬಗ್ಗೆ ಇಲ್ಲ ಈ ಸರ್ಕಾರಕ್ಕೆ. RSS ಏಜೆಂಟ್ನಂತೆ ವರ್ತಿಸುವ ಅಸಮರ್ಥ ಶಿಕ್ಷಣ ಸಚಿವರಿಂದಾಗಿ ರಾಜ್ಯದ ಮಕ್ಕಳ ಭವಿಷ್ಯಕ್ಕೆ ದಾರಿ ಇಲ್ಲದಂತಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ, ಆದರೆ ಇನ್ನೂ ಸಹ ಪಠ್ಯಪುಸ್ತಕಗಳನ್ನು ಪೂರೈಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
— Karnataka Congress (@INCKarnataka) May 11, 2022
ಪಠ್ಯಗಳಲ್ಲಿ 'ಪ್ರೊಪೆಗಂಡಾ' ಸ್ಥಾಪಿಸಲು ಇರುವ ಆಸಕ್ತಿ ಮಕ್ಕಳ ಶಿಕ್ಷಣದ ಬಗ್ಗೆ ಇಲ್ಲ ಈ ಸರ್ಕಾರಕ್ಕೆ.
RSS ಏಜೆಂಟ್ನಂತೆ ವರ್ತಿಸುವ ಅಸಮರ್ಥ ಶಿಕ್ಷಣ ಸಚಿವರಿಂದಾಗಿ ರಾಜ್ಯದ ಮಕ್ಕಳ ಭವಿಷ್ಯಕ್ಕೆ ದಾರಿ ಇಲ್ಲದಂತಾಗಿದೆ.