ಮುನಿರಾಜು ವೈರಲ್ ವಿಡಿಯೋ ಬಗ್ಗೆ ಸಚಿವ ಆರ್ .ಅಶೋಕ್ ಸ್ಪಷ್ಟೀಕರಣ ನೀಡಬೇಕು: ಪ್ರಕಾಶ್ ರಾಥೋಡ್
ಪ್ರಕಾಶ್ ಕೆ. ರಾಥೋಡ್
ಬೆಂಗಳೂರು: ‘ಉಪಚುನಾವಣೆಯಲ್ಲಿ ಒಂದು ಸಾವಿರ ಜನ ಕಾರ್ಯಕರ್ತರು ಬಂದು... ಐದೈದು, ಹತ್ತತ್ತು ಓಟ್ ಹಾಕಿದ್ರು. ಆ ರೀತಿ ಪಕ್ಷ ಕಟ್ಟಿದ್ದಕ್ಕೆ.. ಇವತ್ತು 119 ವಿಧಾನಸಭಾ ಸದಸ್ಯರನ್ನು ಇಟ್ಕೊಂಡು ಸರಕಾರ ಮಾಡಿದ್ದೇವೆ..’ ಬಿಜೆಪಿಯ ಮಾಜಿ ಶಾಸಕ ಮುನಿರಾಜು ಹೇಳಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಪರಿಷತ್ನ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ. ರಾಥೋಡ್, ಚುನಾವಣಾ ಆಯೋಗ ಈ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಲು ಸೂಚಿಸಬೇಕು. ಸೂಕ್ತ ತನಿಖೆ ನಡೆಯಬೇಕು ಮತ್ತು ಸಚಿವ ಆರ್ .ಅಶೋಕ್ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಕರ್ಮಕಾಂಡ ಸ್ವತಃ ಬಿಜೆಪಿ ಮಾಜಿ ಶಾಸಕ ಮುನಿರಾಜು ಅವರ ಬಾಯಲ್ಲೇ ಹೊರಗೆ ಬಂದಿದೆ. ಹಾಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದಿದ್ದು ಬಿಜೆಪಿ ಕಾರ್ಯಕರ್ತರು ಮಾಡಿದ ಕಳ್ಳ ಮತದಾನದಿಂದ ಎನ್ನುವುದನ್ನು ಸ್ವತಃ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೇ ಒಪ್ಪಿಕೊಂಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಚುನಾವಣಾ ಆಯೋಗ ಈ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಲು ಸೂಚಿಸಬೇಕು. ಸೂಕ್ತ ತನಿಖೆ ನಡೆಯಬೇಕು. ಸಚಿವ @RAshokaBJP ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. pic.twitter.com/VH13pX5lB1
— Prakash Rathod (@PRathod_INC) May 21, 2022