ಹಾವೇರಿ: ವಿಶೇಷ ಚೇತನ ಯುವತಿಯ ಅತ್ಯಾಚಾರ; ಓರ್ವ ಆರೋಪಿಯ ಬಂಧನ
ಹಾವೇರಿ: ವಿಶೇಷ ಚೇತನ ಯುವತಿಯ ಮೇಲೆ ಅತ್ಯಾಚಾರ ನಡೆದ ಘಟನೆ ಜಿಲ್ಲೆಯ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಪರಶುರಾಮ ಮಡಿವಾಳ (3) ಎಂಬಾತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಯಶವಂತ್ (38) ತಲೆ ಮರೆಸಿಕೊಂಡಿದ್ದಾನೆ. ಇಬ್ಬರೂ ಆರೋಪಿಗಳು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನವರು ಎಂದು timesofindia ವರದಿ ಮಾಡಿದೆ.
19 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆ ಯುವತಿ ಅಸ್ವಸ್ಥೆಯಾಗಿ ಹಾಸಿಗೆ ಹಿಡಿದಿದ್ದಳು. ಪೋಷಕರು ಕೆಲಸಕ್ಕೆ ಹೋಗಿದ್ದ ಮತ್ತು ಯುವತಿಯ ತಂಗಿ ಶಾಲೆಗೆ ಹೋಗಿ ಯುವತಿ ಒಬ್ಬಂಟಿಯಾಗಿದ್ದ ಅವಧಿಯಲ್ಲಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ಶಾಮಿಯಾನಾ ವ್ಯವಹಾರ ನಡೆಸುತ್ತಿದ್ದು, ಕೆಲಸವೊಂದರ ಸಂಬಂಧ ಹಲವು ದಿನಗಳಿಂದ ತಿಳುವಳ್ಳಿ ಗ್ರಾಮದಲ್ಲಿ ಇದ್ದರು ಎನ್ನಲಾಗಿದೆ.
ಅಸ್ವಸ್ಥ ಯುವತಿ ಒಬ್ಬಂಟಿಯಾಗಿ ಮನೆಯ ಮುಂದೆ ಮಂಚದಲ್ಲಿ ಮಲಗಿರುವುದನ್ನು ಕಂಡ ಆರೋಪಿಗಳು, ಮಂಗಳವಾರ ಸಂಜೆ ಮನೆಗೆ ಬಂದು ಆಕೆಯನ್ನು ಒಳಕ್ಕೆ ಎಳೆದೊಯ್ದು ಈ ಕೃತ್ಯ ಎಸಗಿದ್ದಾರೆ. "ನೆರವಿಗಾಗಿ ಯಾಚಿಸದಂತೆ ತಡೆಯಲು ಬಾಯಿಗೆ ಬಟ್ಟೆ ತುರುಕಿದ್ದರು" ಎಂದು ಅಡೂರ್ ಠಾಣೆಯ ಎಸ್ಐ ಗಡೇಪ್ಪ ಗುಂಜಟಗಿ ಹೇಳಿದ್ದಾರೆ.
ಯುವತಿ ಹಸಿಗೆ ಹಿಡಿದಿದ್ದರೂ, ಮಾತನಾಡುವ ಹಾಗೂ ಸುಳಿವು ನಿಡುವ ಸ್ಥಿತಿಯಲ್ಲಿದ್ದಳು ಎಂದು ಅವರು ವಿವರಿಸಿದ್ದಾರೆ.