ಕೃಷಿ ಇಲಾಖೆ-ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಜೂ. 5ರಂದು ಕೋಟಿ ವೃಕ್ಷ ಆಂದೋಲನ
ಬೆಂಗಳೂರು,3 ಜೂನ್ : ಕೃಷಿ ಇಲಾಖೆ ಜಲಾನಯನ ಇಲಾಖೆಯಿಂದ ಇದೇ ಮೊದಲ ಬಾರಿಗರ ಜೂನ್ 5ರಂದು "ಕೋಟಿ ವೃಕ್ಷ ಆಂದೋಲನ" ವನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತುಮಕೂರಿನಲ್ಲಿ ಕೋಟಿವೃಕ್ಷ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಆಂದೋಲನಕ್ಕೆ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲರು ಚಾಲನೆ ನೀಡಲಿದ್ದಾರೆ.
ಅಂದು ರಾಜ್ಯದ ಎಲ್ಲಾ ಕೃಷಿ ಇಲಾಖೆ ಆವರಣ,ರೈತರ ಬದು ಹೊಲಗಳಲ್ಲಿ ಎಲ್ಲಾ ಸರ್ಕಾರಿ ಇಲಾಖೆ ಆವರಣಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಪ್ರೇಮ ಕಾಳಜಿಯನ್ನು ವ್ಯಕ್ತಪಡಿಸಬೇಕು.ಸಸಿಗಳನ್ನು ಬರಿ ನೆಡುವುದಷ್ಟೇ ಅಲ್ಲ ಅವುಗಳನ್ನು ಪೋಷಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
Next Story