ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕೊಡಗಿನ ಪೂಣಚ್ಚ ಪ್ರಮಾಣ ವಚನ ಸ್ವೀಕಾರ
ಮಡಿಕೇರಿ ಜೂ.14: ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನಿಯುಕ್ತಿಗೊಂಡಿರುವ ಕೊಡಗಿನ ಚೆಪ್ಪುಡೀರ ಎಂ.ಪೂಣಚ್ಚ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಕೋರ್ಟ್ ಹಾಲ್ 1ರಲ್ಲಿ ನಡೆದ ಸಮಾರಂಭದಲ್ಲಿ ಪೂಣಚ್ಚರಿಗೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅಶ್ವಥಿ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ವಿವಿಧ ನ್ಯಾಯಾಧೀಶರುಗಳು ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.
ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಪೂಣಚ್ಚ ಅವರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದು, ಜೂ.8 ಕೇಂದ್ರ ಸರಕಾರದ ಮೂಲಕ ಅಧಿಕೃತ ಆದೇಶವಾಗಿತ್ತು. ಇವರು ತಿತಿಮತಿ ಸನಿಹದ ನೊಕ್ಯ-ಸಿದ್ದಾಪುರ ಗ್ರಾಮದವರಾಗಿದ್ದಾರೆ.
Next Story