ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಎಸ್ ಮುಗಿಬಿದ್ದಿದೆ: ಕಾಂಗ್ರೆಸ್ ಆಕ್ರೋಶ
ರಣದೀಪ್ ಸುರ್ಜೇವಾಲ
ಬೆಂಗಳೂರು: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಎಸ್ ಮುಗಿಬಿದ್ದಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುರ್ಜೇವಾಲ, ‘ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೌನ ಒಪ್ಪಂದ ಬಹಿರಂಗವಾಗಿದೆ. ಜೆಡಿಎಸ್ ಜೂನ್ 15 ರಂದು ದೆಹಲಿಯಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿತು ಮತ್ತು ಸಾಮಾನ್ಯ ರಾಷ್ಟ್ರಪತಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಆದರೆ, ಈಗ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಎಸ್ ಮುಗಿಬಿದ್ದಿದೆ. ಬಿಜೆಪಿಯ ಬಿ ಟೀಂ ಬಹಿರಂಗವಾಗಿದೆ.ʼ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
The tacit understanding between BJP & JD(S) in Karnataka is out in the open.
— Randeep Singh Surjewala (@rssurjewala) June 30, 2022
JD(S) attended Opposition Meet in Delhi on 15 June & resolved to field a common Presidential Candidate.
JD(S) has now somersaulted to support BJP’s Presidential Candidate.
BJP’s B-Team stands exposed.