ಇಂದಿನ ದಿನಪತ್ರಿಕೆಯ ತುಂಬೆಲ್ಲಾ ರಾಜ್ಯದ ಭ್ರಷ್ಟಾಚಾರದ್ದೇ ಸುದ್ದಿ: ಕಾಂಗ್ರೆಸ್ ಟ್ವೀಟ್
ಬೆಂಗಳೂರು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್ ಪೌಲ್ ಹಾಗೂ ಬೆಂಗಳೂರು ಜಿಲ್ಲಾಧಿಕಾರಯಾಗಿದ್ದ ಜೆ.ಮಂಜುನಾಥ್ ಅವರ ಬಂಧನ ವಿಚಾರವನ್ನು ಪ್ರಸ್ತಾಪಿಸಿ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಇಂದಿನ ದಿನಪತ್ರಿಕೆಯ ತುಂಬೆಲ್ಲಾ ಈ ರಾಜ್ಯದ ಭ್ರಷ್ಟಾಚಾರದ ಸುದ್ದಿಗಳೇ' ಎಂದು ಟೀಕಿಸಿದೆ.
''ನೇಮಕ ವಿಭಾಗದ ಪೊಲೀಸ್ ಮುಖ್ಯಸ್ಥರೇ ಅರೆಸ್ಟ್ ಆಗಿದ್ದಾರೆ. ಲಂಚ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಬಂಧನ ಆಗಿದೆ. ಇನ್ನು ಅಕ್ರಮ ಪ್ರಶ್ನಿಸಿದ ಜಡ್ಜ್ ಗೇ ಬೆದರಿಕೆ ಹಾಕಲಾಗಿದೆ. ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಆಡಳಿತ ಹೇಗೆ ಹಳ್ಳ ಹಿಡಿಯುತ್ತದೆ ಎಂಬುದಕ್ಕೆ ಇದು ಸಾಕ್ಷಿ. ನಾ ಖಾವೂಂಗಾ.. ನಾ??'' ಎಂದು ಕಾಂಗ್ರೆಸ್ ಕಿಡಿಗಾರಿದೆ.
ಇಂದಿನ ದಿನಪತ್ರಿಕೆಯ ತುಂಬೆಲ್ಲಾ ಈ ರಾಜ್ಯದ ಭ್ರಷ್ಟಾಚಾರದ ಸುದ್ದಿಗಳೇ.
— Karnataka Congress (@INCKarnataka) July 5, 2022
✓ನೇಮಕ ವಿಭಾಗದ ಪೊಲೀಸ್ ಮುಖ್ಯಸ್ಥರೇ ಅರೆಸ್ಟ್
✓ಲಂಚ: ಜಿಲ್ಲಾಧಿಕಾರಿ ಬಂಧನ
✓ಅಕ್ರಮ ಪ್ರಶ್ನಿಸಿದ ಜಡ್ಜ್ ಗೇ ಬೆದರಿಕೆ
ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಆಡಳಿತ ಹೇಗೆ ಹಳ್ಳ ಹಿಡಿಯುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ನಾ ಖಾವೂಂಗಾ.. ನಾ?? pic.twitter.com/dSgUYobdAJ