ಸಿಎಂ ರಾಜೀನಾಮೆ ನೀಡಿದರೆ ಕರ್ನಾಟಕಕ್ಕೆ ಒಳಿತಾಗಲಿದೆ: ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಿದರೆ ಕರ್ನಾಟಕಕ್ಕೆ ಒಳಿತಾಗಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆಗೆ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರು ಕೊನೆಗೂ ನಿದ್ದೆಯಿಂದ ಎದ್ದಿದ್ದಾರೆ. ಅವರ ಮಂತ್ರಿಗಳು ಜನರ ಅಗತ್ಯಗಳಿಗೆ ಸ್ಪಂದಿಸದವರಾಗಿದ್ದಾರೆ. . ಮಕ್ಕಳು ಶೂ ಮತ್ತು ಸಾಕ್ಸ್ಗಳನ್ನು ಧರಿಸುವ ಅಗತ್ಯವನ್ನು ಪ್ರಶ್ನಿಸುವ ಅಹಂಕಾರವನ್ನು ಸಚಿವರು ಹೊಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಅವರಿಗೆ ವಾಸ್ತವವನ್ನು ತೋರಿಸಲೇಬೇಕಿತ್ತು. ಸಿಎಂ ರಾಜೀನಾಮೆ ನೀಡಿದರೆ ಕರ್ನಾಟಕಕ್ಕೆ ಒಳಿತಾಗಲಿದೆ ಎಂದು ಹೇಳಿದ್ದಾರೆ.
‘ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಹಂಚಿಕೆಗೆ 132 ಕೋಟಿ ರೂಪಾಯಿಗಳನ್ನು ಒದಗಿಸಿ, ಹಣ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ' ಎಂದು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
.@CMofKarnataka @BSBommai has finally woken up from sleep.
— Siddaramaiah (@siddaramaiah) July 9, 2022
His ministers are cold hearted to the needs of people. They have arrogance to question the need for Children to wear shoes & socks.@INCKarnataka had to show them the reality. Karnataka will be better off if CM resigns. pic.twitter.com/qxcNZNLuAf