ಬಿಜೆಪಿ ಕೇವಲ ಅಧಿಕಾರಕ್ಕಾಗಿ ಕಟ್ಟಿರುವ ರಾಜಕೀಯ ಪಕ್ಷ ಅಲ್ಲ: ಕಾಂಗ್ರೆಸ್ ಗೆ ಸಚಿವ ಸುಧಾಕರ್ ತಿರುಗೇಟು
photo- twitter@mla_sudhakar
ಬೆಂಗಳೂರು: 'ಒಂದು ಕುಟುಂಬದ ಪ್ರೈವೇಟ್ ಕಂಪೆನಿಯಾಗಿ ಹೈಕಮಾಂಡ್ ಸಂಸ್ಕೃತಿಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವ, ತಳಸ್ಪರ್ಶೀ ಸಂಘಟನೆ ಇವೆಲ್ಲವೂ ಮರೀಚಿಕೆಯಾಗಿರುವುದು ಅಚ್ಚರಿಯೇನಲ್ಲ. ಬಿಜೆಪಿ ಕೇವಲ ಅಧಿಕಾರಕ್ಕಾಗಿ ಕಟ್ಟಿರುವ ರಾಜಕೀಯ ಪಕ್ಷವಲ್ಲ, ಸಮಾಜಿಕ ಪರಿವರ್ತನೆಯ ಗುರಿಯುಳ್ಳ ಶಿಸ್ತು, ಬದ್ಧತೆಯ ಸಂಘಟನೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
'ಗ್ರಾಮ ಪಂಚಾಯತ್ ಚುನಾವಣೆಯನ್ನೂ ಗೆಲ್ಲದ, ಗೆಲ್ಲಲಾಗದ ಬಿ.ಎಲ್ ಸಂತೋಷ್ ಎಂಬ ವ್ಯಕ್ತಿ ಸಂಪುಟ ಸಚಿವರಿಗೆ ಹೆಡ್ಮಾಸ್ಟರ್ನಂತೆ ಕ್ಲಾಸ್ ತೆಗೆದುಕೊಳ್ಳುವುದು ಬಿಜೆಪಿಯ ದುರಂತ' ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಗೆ ಸಚಿವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
'ಅಂದಿನ ಯುಪಿಎ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಹರಿದು ಹಾಕಿ ಪ್ರಧಾನಮಂತ್ರಿಗಳಿಗೆ ಅಗೌರವ ತೋರಿದ್ದು ಯಾರು ಎಂದು ಜನ ಇನ್ನೂ ಮರೆತಿಲ್ಲ. NAC ಎಂಬ ಅಸಂವಿಧಾನಿಕ ಸಂಸ್ಥೆ ಕಟ್ಟಿಕೊಂಡು ರಿಮೋಟ್ ರಾಜ್ಯಭಾರ ಮಾಡುವ ಮೂಲಕ ಪ್ರಧಾನಿ ಹುದ್ದೆಯನ್ನು ನಗೆಬಾಟಲು ಮಾಡಿದ್ದು ಯಾರು ಎಂದು ಬಿಡಿಸಿ ಹೇಳಬೇಕೆ?' ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ... 'ಗ್ರಾ.ಪಂ ಚುನಾವಣೆಯನ್ನೂ ಗೆಲ್ಲಲಾಗದ ಬಿ.ಎಲ್ ಸಂತೋಷ್ ರಿಂದ ಸಚಿವರಿಗೆ ಕ್ಲಾಸ್': ಕಾಂಗ್ರೆಸ್ ವ್ಯಂಗ್ಯ
ಒಂದು ಕುಟುಂಬದ ಪ್ರೈವೇಟ್ ಕಂಪೆನಿಯಾಗಿ ಹೈಕಮಾಂಡ್ ಸಂಸ್ಕೃತಿಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವ, ತಳಸ್ಪರ್ಶೀ ಸಂಘಟನೆ ಇವೆಲ್ಲವೂ ಮರೀಚಿಕೆಯಾಗಿರುವುದು ಅಚ್ಚರಿಯೇನಲ್ಲ.
— Dr Sudhakar K (@mla_sudhakar) July 18, 2022
ಬಿಜೆಪಿ ಕೇವಲ ಅಧಿಕಾರಕ್ಕಾಗಿ ಕಟ್ಟಿರುವ ರಾಜಕೀಯ ಪಕ್ಷವಲ್ಲ, ಸಮಾಜಿಕ ಪರಿವರ್ತನೆಯ ಗುರಿಯುಳ್ಳ ಶಿಸ್ತು, ಬದ್ಧತೆಯ ಸಂಘಟನೆ.
1/3 https://t.co/ZCyFtu7LPi