ದ್ರೋಹದ ಬಗ್ಗೆ ಬಿಜೆಪಿ ಮಾತಾಡುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್
ಬೆಂಗಳೂರು, ಆ.10: ಎನ್ಡಿಎ ತೊರೆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧಾರ ಬಿಜೆಪಿಯವರ ಪ್ರಕಾರ ದ್ರೋಹವಾಗಿದೆ. ನಿತೀಶ್ ಮಾಡಿದ್ದು ದ್ರೋಹವಾದರೆ, ಜನಾದೇಶವಿಲ್ಲದಿದ್ದರೂ ಸ್ಥಾಪಿತ ಸರಕಾರಗಳನ್ನು ಉರುಳಿಸುವ ಬಿಜೆಪಿ ದ್ರೋಹಕ್ಕೆ ಏನೆಂದು ಕರೆಯಬೇಕು? ಮಧ್ಯಪ್ರದೇಶ, ಕರ್ನಾಟಕ, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಸರಕಾರ ಉರುಳಿಸಿದ್ದು ಜನತೆಗೆ ಮಾಡಿದ ದ್ರೋಹವಲ್ಲವೆ? ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಎನ್ಡಿಎ ಸಖ್ಯ ತೊರೆದು ಬಿಜೆಪಿಯ ಬಳಸಿ ಬಿಸಾಡುವ ಕುತಂತ್ರಕ್ಕೆ ನಿತೀಶ್ ತಿರುಗೇಟು ಕೊಟ್ಟಿದ್ದಾರೆ. ಈಗ ನಿತೀಶ್ ದ್ರೋಹದ ಬಗ್ಗೆ ಮಾತಾಡುವ ಬಿಜೆಪಿ, ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ನುಚ್ಚುನೂರು ಮಾಡಿ ಉದ್ಧವ್ ಠಾಕ್ರೆಗೆ ಮಾಡಿದ್ದು ಪರಮ ದ್ರೋಹವಲ್ಲವೆ? ಅಧಿಕಾರಕ್ಕಾಗಿ ಎಂತಹ ಪಾಪದ ಕೆಲಸ ಮಾಡಲೂ ಹೇಸದ ಬಿಜೆಪಿ ದ್ರೋಹದ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದ್ದಾರೆ.
1#NDA ತೊರೆದ #NitishKumar ನಿರ್ಧಾರ BJPಯವರ ಪ್ರಕಾರ ದ್ರೋಹವಾಗಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 10, 2022
ನಿತಿನ್ ಮಾಡಿದ್ದು ದ್ರೋಹವಾದರೆ, ಜನಾದೇಶವಿಲ್ಲದಿದ್ದರೂ ಸ್ಥಾಪಿತ ಸರ್ಕಾರಗಳನ್ನು ಉರುಳಿಸುವ #BJP ದ್ರೋಹಕ್ಕೆ ಏನೆಂದು ಕರೆಯಬೇಕು?
ಮಧ್ಯಪ್ರದೇಶ,ಕರ್ನಾಟಕ, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರ ಉರುಳಿಸಿದ್ದು ಜನತೆಗೆ ಮಾಡಿದ ದ್ರೋಹವಲ್ಲವೆ?