ಮಡಿಕೇರಿ: ಕಾಂಗ್ರೆಸ್ ಮುಖಂಡರ ವಿರುದ್ಧ ದೂರು
ಮಡಿಕೇರಿ ಆ.20 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕಾರಣ ನೀಡಿ ಬಿಜೆಪಿಯಿಂದ ಕಾಂಗ್ರೆಸ್ ಮುಖಂಡರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಪ್ರಮುಖರಾದ ಅನಿತಾ ಪೂವಯ್ಯ ಅವರ ದೂರು ಆಧರಿಸಿ ಕಾಂಗ್ರೆಸ್ ಪ್ರಮುಖರಾದ ಮಂತರ್ಗೌಡ, ಪೊನ್ನಣ್ಣ ಎ.ಎಸ್., ವೀಣಾ ಅಚ್ಚಯ್ಯ, ಸುರಯ್ಯಾ ಅಬ್ರಾರ್, ಮಿನಾಜ್, ಚಂದ್ರಶೇಖರ, ತೆನ್ನೀರ ಮೈನಾ, ಸೂರಜ್, ಪ್ರಕಾಶ್ ಆಚಾರ್ಯ, ಖಾಲಿದ್, ಶಾಫಿ, ಮೋಹನ್ ದಾಸ್, ಥೆರೆಸಾ ವಿಕ್ಟರ್ ಸೇರಿದಂತೆ 10 ಮಂದಿಗೂ ಹೆಚ್ಚಿನ ಕಾಂಗ್ರೆಸ್ಸಿಗರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
Next Story