ಶಿವಮೊಗ್ಗ | ಯುವಕ ಮೃತ್ಯು: ಈಜುಕೊಳದ ಮಾಲಕನ ವಿರುದ್ಧ FIR
ಶಿವಮೊಗ್ಗ, ಸೆ.30: ನಗರದ ಹೊರವಲಯದ ವಿರುಪಿನಕೊಪ್ಪ ಬಳಿ ಇರುವ ಕರಣ್ಸ್ ಸ್ವಿಮ್ಮಿಂಗ್ ಫೂಲ್ನಲ್ಲಿ ಈಜಲು ಹೋಗಿದ್ದ ರಾಕೇಶ್ ಎಂಬ ಯುವಕನ ಸಾವಿಗೆ ಸಂಬಂಧಿಸಿದಂತೆ ಈಜುಕೊಳದ ಮಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ರಾಕೇಶ್ನ ತಂದೆಯ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದ್ದು, ಈಜುಕೊಳದ ಮಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಕೇಶ್ (18) ಜೋಸೆಫ್ ನಗರದ ನಿವಾಸಿಯಾಗಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಗುರುವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಈ ಈಜುಕೊಳದಲ್ಲಿ ಯಾವುದೇ ಮುಂಜಾಗ್ರತೆ ವ್ಯವಸ್ಥೆ ಇಲ್ಲದಿರುವುದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಹಿಂದೆಯೂ ಕೂಡ ಇಂತದೇ ಪ್ರಕರಣ ನಡೆದಿದ್ದು, ಇದೇ ಈಜುಕೊಳದಲ್ಲಿ ಯುವಕನೊಬ್ಬ ಮೃತಪಟ್ಟಿದ್ದ. ಆಗಲೂ ಪೋಷಕರು ದೂರು ನೀಡಿ,
Next Story