ಕುಣಿಗಲ್ | ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು
ತುಮಕೂರು, ಅ.10: ಕೆಟ್ಟು ನಿಂತಿದ್ದ ಲಾರಿಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ (Accident) ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಣಿಗಲ್ ರಿಂಗ್ ರೋಡ್ ನಲ್ಲಿ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ತುಮಕೂರು ಸರಸ್ವತಿಪುರಂ 2ನೇ ಕ್ರಾಸ್ ನಿವಾಸಿ, ಶಾಂತವೀರಪ್ಪ ಎಂಬವರ ಪುತ್ರ ಲೋಕೇಶ್ ಬಿ.ಎಸ್. ಎಂದು ಗುರುತಿಸಲಾಗಿದೆ.
ಹಿಟಾಚಿ ಸಾಗಿಸುತ್ತಿದ್ದ ಲಾರಿಯೊಂದು ಕುಣಿಗಲ್ ರಿಂಗ್ ರೋಡ್ ನಲ್ಲಿರುವ ಎಂ.ಆರ್.ಪಿ.ಎಲ್. ಪೆಟ್ರೋಲ್ ಬಂಕ್ ಎದುರು ಕೆಟ್ಟು ನಿಂತಿತ್ತು. ಇಂದು ಬೆಳಗ್ಗೆ ಅದೇ ರಸ್ತೆಯಲ್ಲಿ ಹಿಂದಿನಿಂದ ಬಂದ ಲೋಕೇಶ್ ಚಲಾಯಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನಿಧನ
Next Story