ಕನ್ನಡ ವಿವಿಗೆ ಅನುದಾನವನ್ನೇ ಕೊಡದ ಬಿಜೆಪಿ ಸರಕಾರ ಹೊಸ ವಿವಿ ಸ್ಥಾಪನೆ ದೂರದ ಮಾತು: ಕಾಂಗ್ರೆಸ್ ಟೀಕೆ
ಬೆಂಗಳುರು: ಕನ್ನಡ ವಿವಿಗೆ ಅನುದಾನವನ್ನೇ ಕೊಡದ ಬಿಜೆಪಿ ಸರಕಾರ ಹೊಸ ವಿವಿ ಸ್ಥಾಪಿಸುವುದು ದೂರದ ಮಾತು ಎಂದು ಕಾಂಗ್ರೆಸ್ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರಕಾರ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ ಸ್ಥಾಪಿಸುತ್ತೇವೆ ಎಂದಿತ್ತು. ಆದರೆ ಈಗ ವಿಜ್ಞಾನವೂ ಇಲ್ಲ, ಕೃಷಿಯೂ ಇಲ್ಲ, ಬಿಜೆಪಿಗೆ ಬೇಕಿರುವುದು ಮೌಢ್ಯ, ಭ್ರಷ್ಟಾಚಾರ ಮಾತ್ರ. ಕನ್ನಡ ವಿವಿಗೆ ಅನುದಾನವನ್ನೇ ಕೊಡದವರು ಹೊಸ ವಿವಿ ಸ್ಥಾಪಿಸುವುದು ದೂರದ ಮಾತು. ರೈತರ ಏಳಿಗೆಗಾಗಿ ಒಂದೇ ಒಂದು ಯೋಜನೆ ರೂಪಿಸದಿರುವುದೇಕೆ? ಎಂದು ಪ್ರಶ್ನಿಸಿದೆ.
Next Story