ಮಹಾರಾಷ್ಟ್ರದ ರಾಜಕಾರಣಿಗಳು ವೈಯಕ್ತಿಕ ಲಾಭಕ್ಕಾಗಿ ಗಡಿ ವಿವಾದ ಸೃಷ್ಟಿಸುತ್ತಿದ್ದಾರೆ: ಎಂ.ಬಿ. ಪಾಟೀಲ್ ಆರೋಪ
ಬೆಂಗಳೂರು, ನ. 27: ಬೆಳಗಾವಿ ಗಡಿ ವಿವಾದ ಇದೀಗ ಮುಗಿದ ಅಧ್ಯಾಯ. ಆದರೆ, ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಪದೇ ಪದೆ ವಿವಾದ ಸೃಷ್ಟಿಸುವುದು ಸರಿಯಲ್ಲ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಕ್ಷೇಪಿಸಿದ್ದಾರೆ.
ರವಿವಾರ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಸೋಲಾಪುರ, ಅಕ್ಕಲಕೋಟ, ಜತ್ ಸೇರಿದಂತೆ ಇನ್ನೂ ಕೆಲ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವಂತೆ ಧ್ವನಿ ಎತ್ತುತ್ತಿದ್ದಾರೆ. ಮಹಾರಾಷ್ಟ್ರ ಸರಕಾರ ಗಡಿಭಾಗದಲ್ಲಿನ ಅಭಿವೃದ್ದಿ ನಿರ್ಲಕ್ಷಿಸಿದ ಕಾರಣಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.
‘ಜತ್ ತಾಲೂಕಿನಲ್ಲಿ ಕುಡಿಯಲು ನೀರಿಲ್ಲ. ಆದರೂ, ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುತ್ತಿದ್ದಾರೆ. ನಮ್ಮ ಗಡಿಯಲ್ಲಿ ಮತ್ತು ಮಹಾರಾಷ್ಟ್ರದ ವ್ಯಾಪ್ತಿಯ್ಲಲಿ ಕನ್ನಡಿಗರು ಹೆಚ್ಚಾಗಿರುವ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲಿ ಶಾಲೆಗಳಿಲ್ಲ, ಶಿಕ್ಷಕರಿಲ್ಲ. ಅಲ್ಲಿನ ಜನರಿಗೆ ಮೂಲ ಸೌಕರ್ಯಗಳಿಲ್ಲ ಎಂದು ಅವರು ದೂರಿದರು.
ನಮ್ಮ ಅವಧಿಯಲ್ಲಿ ‘ತುಬಚಿ-ಬಬಲೇಶ್ವರ ಏತ ನೀರಾವರಿ’ಯಿಂದ ಗಡಿ ಭಾಗದ ಬಾಬಾನಗರ, ಅಡಗಿನಾಳ, ಯತ್ನಾಳ, ಜಾಲಗೇರಿ ಭಾಗದ ಹಳ್ಳಗಳು ಮತ್ತು ಕೆರೆಗಳಿಗೆ ನೀರು ಬಿಡುವ ಮೂಲಕ ಗಡಿಯಾಚೆ ಇರುವ ಮಹಾರಾಷ್ಟ್ರದ ಗ್ರಾಮಗಳಿಗೂ ನೀರು ಸಿಗುವಂತೆ ಮಾಡಿದ್ದೇವೆ ಎಂದು ಪಾಟೀಲ್ ಸ್ಮರಿಸಿದರು.
ಗಡಿ ವಿಚಾರ ಸೂಕ್ಷ್ಮವಾಗಿದ್ದು, ಸರ್ವಪಕ್ಷಗಳ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತೇನೆ. ಮಹಾರಾಷ್ಟ್ರ ರಾಜಕಾರಣಿಗಳು ‘ಬೆಳಗಾವಿ, ನಿಪ್ಪಾಣಿ ಬೇಕು’ ಎಂದು ಹೇಳುತ್ತಿದ್ದಾರೆ. ಇದು ಏತಕ್ಕಾಗಿ? ಅವುಗಳ ಅಭಿವೃದ್ಧಿ ನಿರ್ಲಕ್ಷಿಸಿ, ಶೋಷಣೆ ಮಾಡುವ ಉದ್ದೇಶವಿದೆಯಾ? ಈ ಹಿಂದೆಯೂ ಅವರು ಕರ್ನಾಟಕದ