ಬಿ.ಎಸ್.ಯಡಿಯೂರಪ್ಪ ಜೈಲಿನಲ್ಲಿದ್ದಾಗ ಬರೆದ ಡೈರಿಯಲ್ಲೇನಿದೆ?: ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜೈಲಿನಲ್ಲಿದ್ದಾಗ ಬರೆದಿದ್ದಾರೆನ್ನಲಾದ ಡೈರಿಯ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಕುರಿತು ಬಿ.ಎಸ್ ಯಡಿಯೂರಪ್ಪ ಅವರ ಪುತ್ರಿ ಡೈರಿ ಬಗ್ಗೆ ಮಾತನಾಡುತ್ತಿರುವ ವಿಡಿಯೋ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಯಾವುದು ಈ ಹೊಸ ಡೈರಿ ಕಥೆ? ನಿಮ್ಮ ಮೇಲೆ ಮಸಲತ್ತು ಮಾಡಿ ನಿಮ್ಮನ್ನು ಜೈಲು ಹಕ್ಕಿ ಮಾಡಿದವರು ಯಾರು?' ಎಂದು ಪ್ರಶ್ನೆ ಮಾಡಿದೆ.
''ಹೇಗೂ ನಿವೃತ್ತಿಯಾಗಿದ್ದೀರಿ, ನಿಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿ ಕಣ್ಣೀರು ಹಾಕಿಸಿದವರ ಕುರಿತಾಗಿಯೂ ಒಂದು ಪುಸ್ತಕ ಬರೆಯಿರಿ. ರಾಜ್ಯದ ಜನತೆಗೆ ನಿಮ್ಮ ವಿರುದ್ಧ ನಿಮ್ಮ ಪಕ್ಷದವರೇ ನಡೆಸಿದ ಮಸಲತ್ತು ತಿಳಿಯಲಿ'' ಎಂದು ಕಾಂಗ್ರೆಸ್ ಕುಟುಕಿದೆ.
''ಮಾಜಿ ಮುಖ್ಯಮಂತ್ರಿಗಳ ಡೈರಿ ಬಗ್ಗೆ ನನಗೇನೂ ಗೊತ್ತಿಲ್ಲ, ಮಾಹಿತಿಯೇ ಇಲ್ಲ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಮಾನ್ಯ @BSYBJP ಅವರೇ, ಯಾವುದು ಈ ಹೊಸ ಡೈರಿ ಕಥೆ? ನಿಮ್ಮ ಮೇಲೆ ಮಸಲತ್ತು ಮಾಡಿ ನಿಮ್ಮನ್ನು ಜೈಲು ಹಕ್ಕಿ ಮಾಡಿದವರು ಯಾರು?
— Karnataka Congress (@INCKarnataka) February 27, 2023
ಹೇಗೂ ನಿವೃತ್ತಿಯಾಗಿದ್ದೀರಿ, ನಿಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿ ಕಣ್ಣೀರು ಹಾಕಿಸಿದವರ ಕುರಿತಾಗಿಯೂ ಒಂದು ಪುಸ್ತಕ ಬರೆಯಿರಿ. ರಾಜ್ಯದ ಜನತೆಗೆ ನಿಮ್ಮ ವಿರುದ್ಧ ನಿಮ್ಮ ಪಕ್ಷದವರೇ ನಡೆಸಿದ ಮಸಲತ್ತು ತಿಳಿಯಲಿ pic.twitter.com/CSmr66Da5m