ಯಡಿಯೂರಪ್ಪ ಚುನಾವಣಾ ಆಯುಕ್ತರಾ ..? : ಸಿಎಂ ವ್ಯಂಗ್ಯ
ಮೈಸೂರು, ಎ.26: ಅವಧಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚುನಾವಣಾ ಆಯೋಗದ ಆಯುಕ್ತರಾ ? ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ “ ಯಡಿಯೂರಪ್ಪ ತೆರಿಗೆ ಆಯುಕ್ತರು ಆಗಿದಾಯ್ತು. ಈಗ ಚುನಾವಣಾ ಆಯಕ್ತರಾಗಲು ಹೊರಟಿದ್ದಾರೆ’’ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯಲಿದೆ ಎಂದು ಯಡಿಯೂರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ “ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ. 2018ರ ಮೇನಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ‘’ ಎಂದು ಸ್ಪಷ್ಟಪಡಿಸಿದರು.
“ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹಾನ್ ಸುಳ್ಳುಗಾರರು. ಅವರು ಹೇಳಿರುವ ಯಾವುದು ಈವರೆಗೂ ನಡೆದಿಲ್ಲ’’ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.
“ನಮ್ಮ ಸಚಿವರು ಜೈಲಿಗೆ ಹೋಗುತ್ತಾರೆಂದು ಬಿಎಸ್ ವೈ ಹೇಳಿದರು. ಈಗ ಜೈಲಿಗೆ ಹೋದವರು ಯಾರು ?’’ ಎಂದು ಪ್ರಶ್ನಿಸಿದರು.
Next Story