ಭಾರತದ ಮಡಿಲಿಗೆ ಅಂಡರ್-19 ವಿಶ್ವಕಪ್: ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ
ಹೊಸದಿಲ್ಲಿ, ಫೆ.3: ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಜಯ ಸಾಧಿಸಿ ನಾಲ್ಕನೇ ಬಾರಿ ಅಂಡರ್-19 ವಿಶ್ವಕಪ್ನ್ನು ಜಯಿಸಿರುವ ಭಾರತದ ಕಿರಿಯರ ಕ್ರಿಕೆಟ್ ತಂಡಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲ್ಲಿಸಿದ್ದಾರೆ.
ಅಂಡರ್-19 ವಿಶ್ವಕಪ್ನ್ನು ಜಯಿಸಿರುವ ಭಾರತದ ಪ್ರತಿಭಾವಂತ ಯುವ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ನಾಯಕ ಪೃಥ್ವಿ ಶಾ ಹಾಗೂ ಅವರ ಸಹ ಆಟಗಾರರು ಎಲ್ಲರಿಗೂ ಹೆಮ್ಮೆ ತಂದಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಹಾಗೂ ಸಹಾಯಕ ಸಿಬ್ಬಂದಿ ಕಠಿಣ ಶ್ರಮಕ್ಕೆ ಫಲ ಲಭಿಸಿದೆ ಎಂದು ಕೋವಿಂದ್ ಹೇಳಿದ್ದಾರೆ.
‘‘ನಮ್ಮ ಯುವ ಕ್ರಿಕೆಟಿಗರ ಅಮೋಘ ಸಾಧನೆಯು ನಿಜವಾಗಿಯೂ ರೋಮಾಂಚನ ಉಂಟು ಮಾಡಿದೆ. ಅಂಡರ್-19 ವಿಶ್ವಕಪ್ ಜಯಿಸಿರುವ ಜೂನಿಯರ್ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ವಿಶ್ವ ಚಾಂಪಿಯನ್ ಆಗಿರುವ ಭಾರತದ ಆಟಗಾರರು ಎಲ್ಲರಿಗೂ ಹೆಮ್ಮೆ ತಂದಿದ್ದಾರೆ’’ ಎಂದು ಮೋದಿ ಹೇಳಿದ್ದಾರೆ.
Next Story