ವಿಕಾಸ್, ಗಣಪತಿ ಚೆಂಗಪ್ಪಗೆ 20 ಲಕ್ಷ ರೂ. ಬಹುಮಾನ
ಚೆನ್ನೈ, ಸೆ.1: ಏಶ್ಯನ್ ಗೇಮ್ಸ್ನ ಪುರುಷರ ಸೈಲಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿರುವ ರಾಜ್ಯದ ಕ್ರೀಡಾಪಟುಗಳಾದ ವಿಕಾಸ್ ಥಕ್ಕರ್ ಹಾಗೂ ಗಣಪತಿ ಚೆಂಗಪ್ಪ ಕೆಲಪಂಡಾಗೆ ತಮಿಳುನಾಡು ಸರಕಾರ ತಲಾ 20 ಲಕ್ಷ ರೂ.ಬಹುಮಾನ ಘೋಷಿಸಿದೆ. ರಾಜ್ಯದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುವ ನೀತಿಯ ಭಾಗವಾಗಿ ನಗದು ಬಹುಮಾನ ಪ್ರಕಟಿಸಿರುವ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಥಕ್ಕರ್ ಹಾಗೂ ಚೆಂಗಪ್ಪಗೆ ಪ್ರತ್ಯೇಕ ಪತ್ರ ಬರೆದು ಪದಕ ಗೆದ್ದ ಸಾಧನೆಯನ್ನು ಶ್ಲಾಘಿಸಿದ್ದಾರೆ.
Next Story