ವಿಶ್ವಕಪ್ನಿಂದ ನಿರ್ಗಮನ: ಆಟಗಾರರ ತಲೆದಂಡ ಕೇಳುವುದು ಮೂರ್ಖತನ: ಗಂಭೀರ್
ಹೊಸದಿಲ್ಲಿ, ಜು.14:‘‘ಭಾರತ ವಿಶ್ವಕಪ್ ಟೂರ್ನಿಯನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿದೆ. ಆದರೆ, ಇದಕ್ಕಾಗಿ ಆಟಗಾರರ ತಲೆದಂಡ ಕೇಳುವುದು ಮೂರ್ಖತನ’’ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ವಿಶ್ವಕಪ್ನ ಸೆಮಿ ಫೈನಲ್ಗೆ ತಲುಪಿದ್ದ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಶರಣಾಗಿತ್ತು. ಮುಂಬರುವ ಏಕದಿನ ಪಂದ್ಯಗಳಲ್ಲಿ ಎಂಎಸ್ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸುವುದು ಹೊರತುಪಡಿಸಿ ಬೇರೆನೂ ಬದಲಾವಣೆಯ ಅಗತ್ಯವಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟರು.
Next Story