ಚೆನ್ನೈ ವಿರುದ್ಧ ರವಿವಾರದ ಪಂದ್ಯಕ್ಕೆ ಗ್ರೀನ್ ಜರ್ಸಿ ಧರಿಸಲಿದೆ ಆರ್ಸಿಬಿ
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರವಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಹಸಿರು ಜರ್ಸಿ ಧರಿಸಿ ಆಡಲಿದೆ. ಪ್ರತಿ ವರ್ಷ ನಡೆಯಲಿರುವ ಗೋ ಗ್ರೀನ್ ಉಪಕ್ರಮದ ಭಾಗವಾಗಿ ಆರ್ಸಿಬಿ ಈಹೆಜ್ಜೆ ಇಟ್ಟಿದೆ.
ಆರ್ಸಿಬಿಯ ಸಾಮಾಜಿಕ ಜಾಲತಾಣದ ವೀಡಿಯೊದಲ್ಲಿ ಶನಿವಾರ ಎಬಿ ಡಿವಿಲಿಯರ್ಸ್ ಈ ಕುರಿತು ಘೋಷಣೆ ಮಾಡಿದರು. ಜಾಗತಿಕವಾಗಿ ಸ್ವಚ್ಛತೆ ಹಾಗೂ ಹಸಿರು ಕಾಪಾಡುವಂತೆ ಅಭಿಮಾನಿಗಳಲ್ಲಿ ವಿನಂತಿಸಿಕೊಂಡರು.
ಪ್ರತಿ ವರ್ಷ ಐಪಿಎಲ್ ಟೂರ್ನಿಯಲ್ಲಿ ತಾನು ಆಡುವ ಯಾವುದಾದರೊಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಗ್ರೀನ್ ಜರ್ಸಿಯನ್ನು ಧರಿಸಿ ಮೈದಾನಕ್ಕೆ ಇಳಿಯುತ್ತದೆ. 2011ರಲ್ಲಿ ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ. ಭೂಮಿಯನ್ನು ಸ್ವಚ್ಛ ಹಾಗೂ ಹಸಿರಾಗಿರಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಆರ್ಸಿಬಿಯ ಎಲ್ಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಇದಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ.
Next Story