ಇಂಡಿಯನ್ ಸೂಪರ್ ಲೀಗ್: ಕೇರಳ ಬ್ಲಾಸ್ಟರ್ಸ್ ಮಣಿಸಿದ ಎಟಿಕೆ ಮೋಹನ್ ಬಗಾನ್
ಗೆಲುವಿನ ಗೋಲು ಗಳಿಸಿದ ರಾಯ್ ಕೃಷ್ಣ
ಪಣಜಿ, ನ.20: ದ್ವಿತೀಯಾರ್ಧದಲ್ಲಿ ರಾಯ್ ಕೃಷ್ಣ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಎಟಿಕೆ ಮೋಹನ್ ಬಗಾನ್ ತಂಡ ಕೇರಳ ಬ್ಲಾಸ್ಟರ್ಸ್ ತಂಡವನ್ನು 1-0 ಅಂತರದಿಂದ ಮಣಿಸಿ ಈ ವರ್ಷದ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್)ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಉಭಯ ತಂಡಗಳು ಮೊದಲಾರ್ಧದ ಅಂತ್ಯಕ್ಕೆ ಗೋಲು ಗಳಿಸಲು ವಿಫಲವಾದವು. ರಾಯ್ ಕೃಷ್ಣ ಕೊನೆಗೂ 67ನೇ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿ ಮೋಹನ್ ಬಗಾನ್ಗೆ ಮೇಲುಗೈ ಒದಗಿಸಿಕೊಟ್ಟರು.
ಮೋಹನ್ ಬಗಾನ್ ಕೊನೆಯ ತನಕ ಮುನ್ನಡೆಯನ್ನು ಕಾಯ್ದುಕೊಳ್ಳುವುದರೊಂದಿಗೆ 1-0 ಅಂತರದಿಂದ ಪಂದ್ಯ ಗೆದ್ದುಕೊಂಡಿತು. ಐಎಸ್ಎಲ್ನಲ್ಲಿ ಎರಡು ಬಾರಿ ರನ್ನರ್ಸ್ ಅಪ್ ಆಗಿರುವ ಕೇರಳ ಬ್ಲಾಸ್ಟರ್ಸ್ ಇತರ ಎಲ್ಲ ತಂಡಗಳಿಗಿಂತಲೂ ಹೆಚ್ಚು ಬಾರಿ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಆಡಿದೆ.
Next Story