ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಗೆ ಅರ್ಹತೆ ಪಡೆದ ಶ್ರೀಕಾಂತ್, ಸಿಂಧು
ಹೈದರಾಬಾದ್, ಜ.25: ಬ್ಯಾಂಕಾಕ್ನಲ್ಲಿ ಜನವರಿ 27ರಿಂದ 31 ರವರೆಗೆ ನಡೆ ಯಲಿರುವ ಬಿಡಬ್ಲ್ಯೂಎಫ್ ವಿಶ್ವ ಪ್ರವಾಸ ಫೈನಲ್ಗೆ ಕಿಡಂಬಿ ಶ್ರೀಕಾಂತ್ ಮತ್ತು ಪಿ.ವಿ ಸಿಂಧು ಅರ್ಹತೆ ಪಡೆದರು.
ಪುರುಷರ ಡಬಲ್ಸ್ ತಂಡದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಅವರು ಸೆಮಿಫೈನಲ್ ತಲುಪಿದ್ದರೂ, ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಗೆ ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.
ಟೂರ್ ಶ್ರೇಯಾಂಕದಲ್ಲಿ ಅಗ್ರ ಎಂಟರಲ್ಲಿ ಸ್ಥಾನ ಗಳಿಸಿದ ಆಟಗಾರರು ಮತ್ತು ತಂಡಗಳು ಮಾತ್ರ ಈವೆಂಟ್ನಲ್ಲಿ ಫೈನಲ್ಸ್ನಲ್ಲಿ ಅವಕಾಶ ಪಡೆದಿವೆ. ಎರಡು ಈವೆಂಟ್ಗಳಲ್ಲಿ ಶ್ರೀಕಾಂತ್ ಹೆಚ್ಚು ಸಾಧನೆ ಮಾಡದಿದ್ದರೂ, ಕೊರೋನ ವೈರಸ್ ಸೋಂಕಿನ ಭಯದಿಂದಾಗಿ ಚೀನಾ ಮತ್ತು ಜಪಾನ್ನ ಶಟ್ಲರ್ಗಳು ಈ ಮೂರು ಈವೆಂಟ್ಗಳಿಂದ ಹೊರಬಂದ ಕಾರಣ ಶ್ರೀಕಾಂತ್ಗೆ ಅಗ್ರ-ಎಂಟರಲ್ಲಿ ಉಳಿಯಲು ಸಾಧ್ಯವಾಯಿತು.
ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಟೂರ್ ಶ್ರೇಯಾಂಕದಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಅವರ ವಿಶ್ವ ಶ್ರೇಯಾಂಕವು 14 ಆಗಿದೆ.
ವಿಶ್ವ ಚಾಂಪಿಯನ್ ಸಿಂಧು ಫೈನಲ್ಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಅವರು ವಿಶ್ವ ಶ್ರೇಯಾಂಕದಲ್ಲಿ ನಂ .7ನೇ ಸ್ಥಾನದಲ್ಲಿದ್ದಾರೆ. ಅಗ್ರ ಎಂಟರಲ್ಲಿ ಥಾಯ್ಲೆಂಡ್ನ ಮೂವರು ಆಟಗಾರರು ಮತ್ತು ಜಪಾನ್ನ ನೊಜೋಮಿ ಒಕುಹರಾ ಕೂಡ ಇದ್ದಾರೆ. ಪ್ರತಿ ದೇಶದ ಇಬ್ಬರು ಆಟಗಾರರು ಮಾತ್ರ ಅರ್ಹರಾಗಿದ್ದಾರೆ ಮತ್ತು ಒಕುಹರಾ ಈಗಾಗಲೇ ಎಲ್ಲಾ ಮೂರು ಪಂದ್ಯಾವಳಿಗಳಿಂದ ಹೊರಬಂದಿದ್ದಾರೆ. ಇದು ಸಿಂಧುಗೆ ಅರ್ಹತೆ ಪಡೆಯಲು ಸಹಾಯ ಮಾಡಿತು. ಫೈನಲ್ಗಾಗಿ ಡ್ರಾ ಮಂಗಳವಾರ ನಡೆಯಲಿದೆ.