ಐಪಿಎಲ್: ದೇವದತ್ತ ಪಡಿಕ್ಕಲ್ ಶತಕ, ಆರ್ ಸಿಬಿಗೆ ಸುಲಭ ತುತ್ತಾದ ರಾಜಸ್ಥಾನ
twitter: photo(@IPL)
ಮುಂಬೈ: ಆರಂಭಿಕ ಬ್ಯಾಟ್ಸ್ ಮನ್ ಗಳಾದ ದೇವದತ್ತ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರ ಸಾಹಸದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ದ 10 ವಿಕೆಟ್ ಗಳ ಅಂತರದಿಂದ ಸುಲಭ ಜಯ ಸಾಧಿಸಿದೆ.
ಇಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ನ 16ನೇ ಪಂದ್ಯದಲ್ಲಿ ಗೆಲ್ಲಲು 178 ರನ್ ಗುರಿ ಪಡೆದ ಆರ್ ಸಿಬಿ 16.3 ಓವರ್ ಗಳಲ್ಲಿ 181 ರನ್ ಗಳಿಸಿ ಗೆಲುವಿನ ದಡ ಸೇರಿತು.
ಬೆಂಗಳೂರು ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ ಗೆಲುವಿನ ಓಟ ಮುಂದುವರಿಸಿತು.
ದೇವದತ್ತ್ 52 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಗಳ ಸಹಿತ ಔಟಾಗದೆ 101 ರನ್ ಸಿಡಿಸಿದರು. ನಾಯಕ ಕೊಹ್ಲಿ ಔಟಾಗದೆ 72 ರನ್(47 ಎಸೆತ, 6 ಬೌಂಡರಿ, 3 ಸಿಕ್ಸರ್) ಸಿಡಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.
Next Story