ಆರ್ ಸಿಬಿಗೆ ಆಘಾತ ನೀಡಿದ ಕೆಕೆಆರ್
ವರುಣ್ ಚಕ್ರವರ್ತಿ, ರಸೆಲ್ ಗೆ ತಲಾ 3 ವಿಕೆಟ್
photo: twitter.com/IPL
ಅಬುಧಾಬಿ, ಸೆ.20: ಆ್ಯಂಡ್ರೆ ರಸೆಲ್(3-9) ಹಾಗೂ ವರುಣ್ ಚಕ್ರವರ್ತಿ(3-13) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಆಟದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸೋಮವಾರ ನಡೆದ ಐಪಿಎಲ್ ನ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಗೆಲ್ಲಲು 93 ರನ್ ಗುರಿ ಪಡೆದ ಕೆಕೆಆರ್ 10 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಶುಭಮನ್ ಗಿಲ್(48, 34 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್(ಔಟಾಗದೆ 41, 27 ಎಸೆತ, 7 ಬೌಂಡರಿ, 1 ಸಿಕ್ಸರ್ )ಮೊದಲ ವಿಕೆಟ್ ಗೆ 82 ರನ್ ಕಲೆ ಹಾಕಿ ಉತ್ತಮ ಆರಂಭ ಒದಗಿಸಿದರು. ಗಿಲ್ 9.1ನೇ ಓವರ್ ನಲ್ಲಿ ಯಜುವೇಂದ್ರ ಚಹಾಲ್ ಗೆ ವಿಕೆಟ್ ಒಪ್ಪಿಸಿದರು. ವೆಂಕಟೇಶ್ ಗೆಲುವಿನ ವಿಧಿ ವಿಧಾನ ಪೂರೈಸಿದರು.
ಇದಕ್ಕೂ ಮೊದಲು ಕೆಕೆಆರ್ ಬೌಲಿಂಗ್ ವೇಗಕ್ಕೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 19 ಓವರ್ ಗಳಲ್ಲಿ 92 ರನ್ ಗಳಿಸಿ ಆಲೌಟಾಯಿತು.