ಸೈಯದ್ ಮುಶ್ತಾಕ್ ಅಲಿ ಟ್ರೋಫಿ: ವಿದರ್ಭವನ್ನು ಮಣಿಸಿ ಫೈನಲ್ ಗೇರಿದ ಕರ್ನಾಟಕ ತಂಡ
ಮಂಗಳವಾರ ತಮಿಳುನಾಡು ತಂಡದ ಜೊತೆ ಅಂತಿಮ ಸೆಣಸಾಟ
Photo: Twitter/@BCCIdomestic
ಬೆಂಗಳೂರು: ಶನಿವಾರ ನಡೆದ ಸೈಯದ್ ಮುಶ್ತಾಕ್ ಅಲಿ ಟಿ-20 ಟ್ರೋಫಿಯ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭವನ್ನು ಕರ್ನಾಟಕ ನಾಲ್ಕು ರನ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.
ನಾಯಕ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಸೋಮವಾರ ಹಾಲಿ ಚಾಂಪಿಯನ್ ತಮಿಳುನಾಡು ವಿರುದ್ಧ ಸೆಣಸಲಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವಿದರ್ಭ 20 ಓವರ್ಗಳಲ್ಲಿ 172/6 ಗಳಿಸಲಷ್ಟೇ ಶಕ್ತವಾಯಿತು.
Next Story