ಆ್ಯಂಡ್ರೂ ಸೈಮಂಡ್ಸ್ ನಿಧನಕ್ಕೆ ಸಚಿನ್, ಹರ್ಭಜನ್ ಸಹಿತ ಮಾಜಿ ಕ್ರಿಕೆಟಿಗರ ಸಂತಾಪ

Photo: twitter
ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ರವಿವಾರ ತಿಳಿಸಿದೆ. ಸೈಮಂಡ್ಸ್ ನಿಧನದ ಸುದ್ದಿ ಹೊರಬಿದ್ದ ತಕ್ಷಣ ಅವರ ಸಮಕಾಲೀನರು ಟ್ವಿಟರ್ ನಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಆಲ್ರೌಂಡರ್ಗೆ ಗೌರವ ಸಲ್ಲಿಸಿದರು.
ಸೈಮಂಡ್ಸ್ ಪತ್ನಿ ಲಾರಾ ಹಾಗೂ ಚಿಕ್ಕ ಮಕ್ಕಳಾದ ಕ್ಲೋಯ್ ಮತ್ತು ಬಿಲ್ಲಿ ಅವರನ್ನು ಅಗಲಿದ್ದಾರೆ.
ಹಲವಾರು ಕ್ರಿಕೆಟಿಗರು ಟ್ವಿಟರ್ನಲ್ಲಿ ಸೈಮಂಡ್ಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
"ಆ್ಯಂಡ್ರೂ ಸೈಮಂಡ್ಸ್ ನಿಧನ ನಮಗೆಲ್ಲರಿಗೂ ಆಘಾತಕಾರಿ ಸುದ್ದಿಯಾಗಿದೆ. ಅವರು ಅದ್ಭುತ ಆಲ್ ರೌಂಡರ್ ಮಾತ್ರವಲ್ಲ ಮೈದಾನದಲ್ಲಿ ಮಿಂಚಿನ ವೇಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಮುಂಬೈ ಇಂಡಿಯನ್ಸ್ ನೊಂದಿಗೆ ನಾವು ಒಟ್ಟಿಗೆ ಕಳೆದ ಸಮಯದ ಸ್ಮರಣೀಯ ನೆನಪು ಸದಾ ಹಸಿರಾಗಿದೆ'' ಎಂದು ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ.
"ಆ್ಯಂಡ್ರೂ ಸೈಮಂಡ್ಸ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರು ಬೇಗನೆ ಎಲ್ಲರನ್ನೂ ಅಗಲಿದ್ದಾರೆ. ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪ, ಅಗಲಿದ ಆತ್ಮಕ್ಕೆ ಪ್ರಾರ್ಥನೆ'' ಎಂದು ಭಾರತದ ಮಾಜಿ ಬೌಲರ್ ಹರ್ಭಜನ್ ಸಿಂಗ್ ಟ್ವೀಟಿಸಿದ್ದಾರೆ.
"ಎಚ್ಚರಗೊಂಡಾಗ ಭಯಾನಕ ಸುದ್ದಿ ಕೇಳಿದೆ. ಈ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ನಾವೆಲ್ಲರೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ ಗೆಳೆಯ'' ಎಂದು ಆಸ್ಟ್ರೇಲಿಯದ ಮಾಜಿ ಆಟಗಾರ ಜೇಸನ್ ಗಿಲ್ಲೆಸ್ಪಿ ಟ್ವೀಟಿಸಿದ್ದಾರೆ.
"ನಿಮಗಾಗಿ ಏನು ಬೇಕಾದರೂ ಮಾಡುವ, ನಿಮ್ಮ ಅತ್ಯಂತ ನಿಷ್ಠಾವಂತ, ವಿನೋದ, ಪ್ರೀತಿಯ ಸ್ನೇಹಿತನ ಬಗ್ಗೆ ಯೋಚಿಸಿ, ಅದು ರಾಯ್'' ಎಂದು ಆಸ್ಟ್ರೇಲಿಯದ ಮಾಜಿ ವಿಕೆಟ್ ಕೀಪರ್ ಆ್ಯಡಂ ಗಿಲ್ ಕ್ರಿಸ್ಟ್ ಟ್ವೀಟಿಸಿದ್ದಾರೆ.
"ಭಾರತದಲ್ಲಿ ಮುಂಜಾನೆ ಎಚ್ಚರವಾಗುವಾಗಲೇ ಆಘಾತಕಾರಿ ಸುದ್ದಿ. ನನ್ನ ಆತ್ಮೀಯ ಗೆಳೆಯನಿಗೆ ಶಾಂತಿ ಲಭಿಸಲಿ. ಅಂತಹ ದುರಂತ ಹೊಸತು'' ಎಂದು ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟ್ವಿಟಿಸಿದರು.
"ಆ್ಯಂಡ್ರೂ ಸೈಮಂಡ್ಸ್ ನಿಧನವಾಗಿರುವ ಸುದ್ದಿ ಕೇಳಿ ದುಃಖವಾಗಿದೆ. ಅವರ ಪರಿವಾರ, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಸಂತಾಪ ಸೂಚಿವೆ''ಎಂದು ಭಾರತದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಟ್ವೀಟಿಸಿದ್ದಾರೆ.
Andrew Symond’s demise is shocking news for all of us to absorb. Not only was he a brilliant all-rounder, but also a live-wire on the field. I have fond memories of the time we spent together in Mumbai Indians.
— Sachin Tendulkar (@sachin_rt) May 15, 2022
May his soul rest in peace, condolences to his family & friends. pic.twitter.com/QnUTEZBbsD
Shocked to hear about the sudden demise of Andrew Symonds. Gone too soon. Heartfelt condolences to the family and friends. Prayers for the departed soul #RIPSymonds
— Harbhajan Turbanator (@harbhajan_singh) May 15, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.