ದಲಿತ ಯುವಕನೊಂದಿಗೆ ವಿವಾಹವಾದ ಪುತ್ರಿಯ ಹತ್ಯೆಗೈದ ತಂದೆ
ರೋಹ್ಟಕ್, ಆ. 10: ದಲಿತ ಯುವಕನನ್ನು ವಿವಾಹವಾದ ಹಿನ್ನೆಲೆಯಲ್ಲಿ ಯುವತಿಯನ್ನು ಆಕೆಯ ತಂದೆಯೇ ಸಂಚು ರೂಪಿಸಿ ರೋಹ್ಟಕ್ನ ನ್ಯಾಯಾ ಲಯದ ಆವರಣದಲ್ಲಿ ಗುಂಡು ಹಾರಿಸಿ ಹತ್ಯೆ ನಡೆಸಿದ ಅಮಾನವೀಯ ಘಟನೆ ಬುಧವಾರ ನಡೆದಿದೆ. ಈ ಘಟನೆಯಲ್ಲಿ ಯುವತಿಗೆ ರಕ್ಷಣೆ ನೀಡುತ್ತಿದ್ದ ಸಬ್ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ಕೂಡ ಮೃತಪಟ್ಟಿದ್ದಾರೆ.
ಅಂತರ್ ಜಾತಿ ವಿವಾಹದಿಂದ ಆಕ್ರೋಶಿತರಾಗಿದ್ದ ಯುವತಿಯ ತಂದೆ ಸಂಚು ನಡೆಸಿ ಈ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯುವತಿಯ ತಂದೆ ರಮೇಶ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ, ಬಂಧಿಸಿಲ್ಲ. ರಮೇಶ್ ಅವರು ಯುವತಿಯನ್ನು ತನ್ನ ಸೋದರ ಸಂಬಂಧಿಯಿಂದ ದತ್ತು ಪಡೆದುಕೊಂಡಿದ್ದರು. ಕಳೆದ ವರ್ಷ ಪುತ್ರಿ ಮಮತಾ ದಲಿತ ಯುವಕನೊಂದಿಗೆ ವಿವಾಹವಾಗಿದ್ದರು. ಇದರಿಂದ ರಮೇಶ್ ಆಕ್ರೋಶಿತರಾಗಿದ್ದರು. ಮಮತಾ ಅಪ್ರಾಪ್ತೆ ಯಾಗಿರುವ ಕಾರಣಕ್ಕಾಗಿ ಪತಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಮಮತಾ ಮನೆಗೆ ಹಿಂದಿರುಗಿಸಲು ನಿರಾಕರಿಸಿದ್ದರು.
Next Story