ಪೊಲೀಸ್ ಅಧಿಕಾರಿಯ ಮೇಲೆ ಕೊಡಲಿಯಿಂದ ದಾಳಿ ನಡೆಸಿದ ಆರೋಪಿಯ ಬಂಧನ
ಬುಲಂದ್ ಶಹರ್ ಹಿಂಸಾಚಾರ
ಲಕ್ನೋ, ಜ.1: ಬುಲಂದ್ ಶಹರ್ ನಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ದಾಳಿ ನಡೆಸಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾಗಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಬಂಧಿತ ಕಲುವಾ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಮೇಲೆ ಕೊಡಲಿಯಿಂದ ದಾಳಿ ನಡೆಸಿ, ಅವರ ಬೆರಳುಗಳನ್ನು ಕತ್ತರಿಸಿದ್ದ ಎನ್ನಲಾಗಿದೆ.
ಆ ಬಳಿಕ ಮತ್ತೋರ್ವ ಆರೋಪಿ ಪ್ರಶಾಂತ್ ನಟ್ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ್ದ ೆಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಡಿಸೆಂಬರ್ 28ರಂದು ಬಂಧಿಸಲಾಗಿದೆ.
ಸುಬೋಧ್ ಕುಮಾರ್ ರ ಮೃತದೇಹ ಕಾರೊಂದರ ಬಳಿ ಪತ್ತೆಯಾಗಿತ್ತು. ಗೋಹತ್ಯೆ ಶಂಕೆಯಲ್ಲಿ ನಡೆದ ಹಿಂಸಾಚಾರವನ್ನು ನಿಯಂತ್ರಿಸಲು ಸುಬೋಧ್ ಕುಮಾರ್ ಆಗಮಿಸಿದ್ದರು.
Next Story