ಪೊಲೀಸ್ ಠಾಣೆಯ ಎದುರೇ ಗುಂಡಿಕ್ಕಿ ವ್ಯಕ್ತಿಯ ಹತ್ಯೆ
ಮಿರ್ಝಾಪುರ,ಜ.10: ಭೂ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಇಲ್ಲಿಯ ನಗರ ಪೊಲೀಸ್ ಠಾಣೆಯ ಎದುರಿನಲ್ಲಿಯೇ 40 ಹರೆಯದ ವ್ಯಕ್ತಿಯೋರ್ವನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು,ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾನೆ.
ತ್ರಿಲೋಕಿ ಮಾಲಿ ಠಾಣೆಯ ಎದುರಿನಲ್ಲಿರುವ ತನ್ನ ಅಂಗಡಿಯಲ್ಲಿ ಕುಳಿತಿದ್ದಾಗ ಸಂಜಯ ಸಿಂಗ್ ಎಂಬಾತ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಮಾಲಿ ಸ್ಥಳದಲ್ಲಿಯೇ ಅಸು ನೀಗಿದ್ದರೆ ಆತನ ಜೊತೆಗಿದ್ದ ಸುನಿಲ್ ಎಂಬಾತ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ವಿಪಿನಕುಮಾರ್ ಮಿಶ್ರಾ ತಿಳಿಸಿದರು.
Next Story