ಮೀ ಟೂ: ಹೋಟೆಲ್ನಲ್ಲಿ ಪ್ರಿಯಾ ರಮಣಿಯನ್ನು ಭೇಟಿಯಾಗಿದ್ದನ್ನು ನಿರಾಕರಿಸಿದ ಎಂ.ಜೆ.ಅಕ್ಬರ್
ಹೊಸದಿಲ್ಲಿ,ಮೇ 20: ತನ್ನ ಮೇಲೆ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿರುವ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ಉದ್ಯೋಗ ಸಂದರ್ಶನಕ್ಕಾಗಿ ತಾನು ಆಕೆಯನ್ನು ಒಬೆರಾಯ್ ಹೋಟೆಲ್ನಲ್ಲಿ ಭೇಟಿಯಾಗಿದ್ದನ್ನು ನಿರಾಕರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಬರ್ ಅವರು ಹೆಚ್ಚುವರಿ ಮಹಾನಗರ ದಂಡಾಧಿಕಾರಿ ಸಮರ ವಿಶಾಲ್ ಅವರ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ವಿಚಾರಣೆಯನ್ನು ನ್ಯಾಯಾಲಯವು ಜು.6ಕ್ಕೆ ಮುಂದೂಡಿದೆ.
ರಮಣಿ ಪರ ಹಿರಿಯ ನ್ಯಾಯವಾದಿ ರೆಬೆಕಾ ಜಾನ್ ಅವರ ಪಾಟೀಸವಾಲಿಗೆ ಉತ್ತರಿಸಿದ ಅಕ್ಬರ್,ಏಷ್ಯನ್ ಏಜ್ ಪತ್ರಿಕೆಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದ ರಮಣಿಯನ್ನು ತಾನು ಒಬೆರಾಯ್ ಹೋಟಲ್ನಲ್ಲಿ ಭೇಟಿಯಾಗಿದ್ದನ್ನು ನಿರಾಕರಿಸಿದರು.
ಅಕ್ಬರ್ ಮತ್ತು ರಮಣಿ ಪರ ವಕೀಲರ ನಡುವೆ ಬಿರುಸಿನ ವಾಗ್ಯುದ್ಧಕ್ಕೂ ನ್ಯಾಯಾಲಯವು ಸಾಕ್ಷಿಯಾಯಿತು.
Next Story