ಕೃಷ್ಣಾ ನದಿ ದಂಡೆಯ ನಿವಾಸದಿಂದ ತೆರವುಗೊಳ್ಳುವಂತೆ ಚಂದ್ರಬಾಬು ನಾಯ್ಡುಗೆ ಸೂಚನೆ
ಲಕ್ನೋ, ಆ. 17: ಅಮರಾವತಿಯ ಕೃಷ್ಣಾ ನದಿ ದಂಡೆಯಲ್ಲಿರುವ ನಿವಾಸದಿಂದ ತೆರವುಗೊಳ್ಳುವಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿಯ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ಶುಕ್ರವಾರ ಸೂಚಿಸಲಾಗಿದೆ.
ಈ ಪ್ರದೇಶದಲ್ಲಿ ನೆರೆ ಉದ್ಬವಿಸುವ ಸಾಧ್ಯತೆ ಇದೆ. ಆದುದರಿಂದ ಇಲ್ಲಿನ ನಿವಾಸದಿಂದ ತೆರವುಗೊಳ್ಳುವಂತೆ ಆಂಧ್ರಪ್ರದೇಶ ಸರಕಾರ ಶನಿವಾರ ಚಂದ್ರಬಾಬು ನಾಯ್ಡು ಅವರಿಗೆ ನೋಟಿಸು ಜಾರಿ ಮಾಡಿದೆ. ನೆರೆ ಪರಿಸ್ಥಿತಿ ಇರುವುದರಿಂದ ನಿವಾಸದಿಂದ ಕೂಡಲೇ ತೆರವುಗೊಳ್ಳಬೇಕೆಂದು ತಾಡೆಪಳ್ಳಿ ಕಂದಾಯ ಅಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ಚಂದ್ರಬಾಬು ನಾಯ್ಡು ಅವರ ನಿವಾಸದ ಸಮೀಪ ಇರುವ ಬಾಳೆ ತೋಟ ಹಾಗೂ ಕೆಲವು ಮನೆಗಳು ಜಲಾವೃತವಾಗಿವೆ ಎಂದು ಅವರು ತಿಳಿಸಿದ್ದಾರೆ.
Next Story