ಜಮ್ಮು ಕಾಶ್ಮೀರದ ಮಕ್ಕಳ ಪರಿಸ್ಥಿತಿ ಕಳವಳಕಾರಿ: ಬಹುಭಾಷಾ ನಟಿ ತ್ರಿಶಾ ಕೃಷ್ಣನ್
“ಶಾಲೆಗಳನ್ನು ಮುಚ್ಚುವುದು ಮಕ್ಕಳ ಮೇಲಿನ ಹಿಂಸೆಯ ಮತ್ತೊಂದು ರೂಪ”
ಚೆನ್ನೈ, ಆ.29: 370ನೆ ವಿಧಿ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲ ವಾರಗಳಿಂದ ಇರುವ ನಿರ್ಬಂಧದ ಬಗ್ಗೆ ಮಾತನಾಡಿರುವ ನಟಿ, ಯುನಿಸೆಫ್ ಸೆಲೆಬ್ರಿಟಿ ಅಡ್ವಕೇಟ್ ತ್ರಿಶಾ ಕೃಷ್ಣನ್, ಕಾಶ್ಮೀರದ ಮಕ್ಕಳ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಶಾಲೆಗಳನ್ನು ಮುಚ್ಚುವುದು ಮಕ್ಕಳ ಮೇಲಿನ ಹಿಂಸೆಯ ಮತ್ತೊಂದು ರೂಪ ಎಂದು ಹೇಳಿರುವ ಅವರು, ಮಕ್ಕಳ ಹಕ್ಕುಗಳ ಯಾವುದೇ ರೀತಿಯ ಉಲ್ಲಂಘನೆಯು ಮಕ್ಕಳ ವಿರುದ್ಧದ ದೌರ್ಜನ್ಯವಾಗಿದೆ” ಎಂದರು.
Next Story