ಡಿ.6ರಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ: ಸಾಕ್ಷಿ ಮಹಾರಾಜ್
ಲಕ್ನೊ, ಅ.16: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಡಿಸೆಂಬರ್ 6ರಿಂದ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೈದ ದಿನವಾಗಿದೆ. ತಾರ್ಕಿಕವಾಗಿ ಅದೇ ದಿನ ದೇವಸ್ಥಾನ ನಿರ್ಮಿಸುವ ಕಾರ್ಯ ಆರಂಭಿಸಲಾಗುವುದು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಪ್ರಯತ್ನದಿಂದಾಗಿ ಈಗ ಕನಸು ನನಸಾಗಲಿದೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಮಂದಿರ ನಿರ್ಮಿಸುವ ಕಾರ್ಯಕ್ಕೆ ನೆರವಾಗಲು ಹಿಂದುಗಳು ಹಾಗೂ ಮುಸ್ಲಿಮರು ಮುಂದೆ ಬರಬೇಕು. ಬಾಬರ್ ಒಬ್ಬ ಆಕ್ರಮಣಕಾರ. ಆತ ತಮ್ಮ ಪೂರ್ವಜನಲ್ಲ ಎಂಬುದನ್ನು ಸುನ್ನಿ ವಕ್ಫ್ ಮಂಡಳಿ ಒಪ್ಪಬೇಕು ಎಂದವರು ಹೇಳಿದ್ದಾರೆ.
Next Story