BREAKING NEWS | ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ. ಚಿದಂಬರಂಗೆ ಜಾಮೀನು
ಮಾಜಿ ಸಚಿವರ 106 ದಿನಗಳ ಜೈಲುವಾಸ ಅಂತ್ಯ
ಹೊಸದಿಲ್ಲಿ, ಡಿ.4: ಐಎನ್ ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಸುಪ್ರೀಂ ಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಭಾನುಮತಿ ನೇತೃತ್ವದ ತ್ರಿ ಸದಸ್ಯ ನ್ಯಾಯಪೀಠ ಚಿದಂಬರಂಗೆ ಜಾಮೀನು ನೀಡಿದೆ.
ಇಬ್ಬರು ಶ್ಯೂರಿಟಿ, 2 ಲಕ್ಷ ರೂ. ಠೇವಣಿ ಇಡಬೇಕು. ಅಧಿಕಾರಿಗಳಿಗೆ ವಿಚಾರಣೆಗೆ ಸಹಕರಿಸಬೇಕು . ಪಾಸ್ ಪೋರ್ಟ್ ವಶಕ್ಕೆ ನೀಡಬೇಕು ಎಂದು ಪಿ.ಚಿದಂಬರಂ ಅವರಿಗೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಸಾರ್ವಜನಿಕೆ ಹೇಳಿಕೆ ಮತ್ತು ಸಂದರ್ಶನ ನೀಡದಂತೆ ಸೂಚನೆ ನೀಡಿದೆ.
ಇದರೊಂದಿಗೆ ಚಿದಂಬರಂ ಅವರ 106 ದಿನಗಳ ಜೈಲುವಾಸ ಅಂತ್ಯಗೊಂಡಿದೆ .
Next Story