ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ರಿಷಿಕೇಶ್ ಜಾರ್ಖಂಡ್ನಲ್ಲಿ ಬಂಧನ
ರಾಂಚಿ, ಜ.9: ಖ್ಯಾತ ಪತ್ರಕರ್ತೆ ಹಾಗೂ ಲೇಖಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತಲೆ ಮರೆಸಿಕೊಂಡಿರುವ ಆರೋಪಿ ರಿಷಿಕೇಶ್ ದೇವಡಿಕರ್ ಅಲಿಯಾಸ್ ಮುರಳಿ (44)ಯನ್ನು ಸಿಟ್ ತಂಡ ಗುರುವಾರ ಸಂಜೆ ಬಂಧಿಸಿದೆ.
ರಿಷಿಕೇಶ್ ದೇವಡಿಕರ್ ಅಲಿಯಾಸ್ ಮುರಳಿಯನ್ನು ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ಕತರಾಸ್ನಿಂದ ಸಿಟ್ ಬಂಧಿಸಿದೆ. ಸುಳಿವಿಗಾಗಿ ಆತನ ಮನೆ ಶೋಧಿಸಲಾಗಿದೆ ಹಾಗೂ ಅಲ್ಲಿಯೇ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭ ಆತ ಸೇರಿ ಗೌರಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆತನನ್ನು ಇಲ್ಲಿನ ವ್ಯಾಪ್ತಿಯ ನ್ಯಾಯಾಂಗ ದಂಡಾಧಿಕಾರಿ ಮುಂದೆ ಶನಿವಾರ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
Next Story